Advertisement

ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ : ಸಂಸದ ರಾಘವೇಂದ್ರ

11:45 PM Jun 21, 2024 | Team Udayavani |

ಕುಂದಾಪುರ: ನಾನಾಗಲಿ ಅಥವಾ ನಮ್ಮ ತಂದೆ ಬಿ.ಎಸ್‌. ಯಡಿಯೂರಪ್ಪ ಅವರಾಗಲಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಕೇಂದ್ರ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗುವುದನ್ನು ಕಣ್ತುಂಬಿಕೊಳ್ಳಲು ಯಡಿಯೂರಪ್ಪ ದಿಲ್ಲಿಗೆ ತೆರಳಿದ್ದರು ಅಷ್ಟೇ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಸ್ಪಷ್ಟಪಡಿಸಿದರು.

Advertisement

ಅವರು ಹೆಮ್ಮಾಡಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಚುನಾವ ಣೆಗೂ ಮೊದಲು ಕಾರ್ಯ ಕರ್ತರ ಸಂಕಲ್ಪದಂತೆ ಮೋದಿಯವರನ್ನು ಕೊಲ್ಲೂ ರಿಗೆ ಕರೆದುಕೊಂಡು ಬರು ವಂತಹ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು.

ರಾಜ್ಯ ಸರಕಾರವು ಗ್ಯಾರಂಟಿ ಹೆಸರಲ್ಲಿ
ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವ ವಿಶ್ವಾಸ ಹೊಂದಿತ್ತು. ಆದರೆ ಫಲಿತಾಂಶ ನೋಡಿ ಮತದಾರರ ಮೇಲೆ ಸೇಡು ತೀರಿಸುವ ಸಲುವಾಗಿ ತೈಲ ದರ ಏರಿಕೆ ಮಾಡಿದ್ದಾರೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next