Advertisement

ಗುಳೇದಗುಡ್ಡ: ಸಮೀಪದ ಲಾಯದಗುಂದಿ ಗ್ರಾಮದ ಯೋಧ ಆಸಂಗೆಪ್ಪ ಪರಸಪ್ಪ ಮಾದರ (28) ಮಂಗಳವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ರಾಂಬಿನ್‌ ಜಿಲ್ಲೆಯ ಬನಿಹಾಳದಲ್ಲಿ ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದ್ದಾರೆ.

Advertisement

ಯೋಧ ಆಸಂಗೆಪ್ಪ ಮಾದರ 2012ರಲ್ಲಿ ಸೇನೆಗೆ ಸೇರಿದ್ದು, ಏಳು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ರಜೆಯ ಮೇಲೆ ಸ್ವ ಗ್ರಾಮಕ್ಕೆ ಬಂದು ಏ.21ರಂದು ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. ಒಂದು ವರ್ಷದ ಹಿಂದೆ ಮದುವೆಯಾಗಿತ್ತು.

ಯೋಧ ಆಸಂಗೆಪ್ಪ ಮಾದರ ಏ.27ರಂದು ರಂದು ಬೆಳಗ್ಗೆ ತಮಗೆ ಕರ್ತವ್ಯಕ್ಕೆ ವಿತರಿಸಿದ್ದ ಗನ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಯೋಧನ ಸಾವಿನ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next