Advertisement

“ಡಯಾಬಿಟಿಸ್‌ ಚಿಕಿತ್ಸಾ ವಿಭಾಗ’ಉದ್ಘಾಟನೆ

07:25 AM Sep 05, 2017 | Team Udayavani |

ಉಡುಪಿ: ಆರೋಗ್ಯ ಸೇವೆಯಲ್ಲಿ ವಿಶೇಷ ಪರಿಣತ ತಜ್ಞ ವೈದ್ಯರನ್ನು ಹೊಂದಿರುವ‌ ಉಡುಪಿಯ ಹೈಟೆಕ್‌ ಮೆಡಿಕೇರ್‌ ಆಸ್ಪತ್ರೆ ವಿವಿಧ ಸ್ಪೆಶಾಲಿಟಿ ಚಿಕಿತ್ಸಾ ವಿಭಾಗಗಳನ್ನು ತನ್ನಲ್ಲಿ ಅಳವಡಿಸುತ್ತ ಬಂದಿದ್ದು, ಇದೀಗ ಪರಿಣತ ಮಧುಮೇಹ ತಜ್ಞೆ ಡಾ| ಎನ್‌. ಶುೃತಿ ಬಲ್ಲಾಳ್‌ ಅವರ ನೇತೃತ್ವದಲ್ಲಿ “ಮಧುಮೇಹ ಚಿಕಿತ್ಸಾ ವಿಭಾಗ’ ರವಿವಾರ ಉದ್ಘಾಟನೆಗೊಂಡಿತು.

Advertisement

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಸೂರ್ಯನಾರಾಯಣ ಉಪಾಧ್ಯ ಅವರು ಉದ್ಘಾಟಿಸಿ, ಉತ್ತಮ ಆರೋಗ್ಯಕ್ಕಾಗಿ ಉತ್ತಮ ಶರೀರ ಹೊಂದುವುದು ಅತೀ ಅಗತ್ಯ. ಇಂದಿನ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವಾಯು, ನೀರು, ಕಲುಷಿತದಿಂದ ಕೂಡಿದ್ದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುತ್ತದೆ. ಇದರಿಂದ ನಮ್ಮ ಶರೀರದ ರಕ್ಷಣೆಯಲ್ಲಿ ವೈದ್ಯರ ಪಾತ್ರ ಅತೀ ಮುಖ್ಯವಾಗಿರುತ್ತದೆ. ಈ ಆಸ್ಪತ್ರೆಯಲ್ಲಿರುವ ಪರಿಣತ ವೈದ್ಯರ ತಂಡ ಹಾಗೂ ಇದೀಗ ಉದ್ಘಾಟನೆಗೊಂಡ ಡಯಾಬಿಟಿಸ್‌ ಚಿಕಿತ್ಸಾ ವಿಭಾಗ ಉತ್ತಮ ಸೇವೆ ನೀಡಲಿ ಎಂದು ಹಾರೈಸಿದರು. 

ಅಂಬಲಪಾಡಿ ದೇವಾಲಯದ ಧರ್ಮದರ್ಶಿ ಡಾ| ವಿಜಯ ಬಲ್ಲಾಳ್‌, ಉಡುಪಿ ಶಾರದಾ ಇಂಟರ್‌ನ್ಯಾಶನಲ್‌ ಹೊಟೇಲ್‌ ಮಾಲಕ ಬಿ. ಸುಧಾಕರ ಶೆಟ್ಟಿ, ಅನಂತ ಆಚಾರ್‌ ಉದ್ಯಾವರ, ಡಾ| ಎನ್‌. ಅರ್ಜುನ್‌ ಬಲ್ಲಾಳ್‌ ಉಪಸ್ಥಿತರಿದ್ದರು. ಸಾಯಿನಾಥ್‌ ಉದ್ಯಾವರ ನಿರೂಪಿಸಿ, ಮಕ್ಕಳ ತಜ್ಞ ಡಾ| ಜನಾರ್ದನ ಪ್ರಭು ವಂದಿಸಿದರು.

ಆಧುನಿಕ ಸೌಲಭ್ಯಗಳು
ಪ್ರಸಿದ್ಧ ವೈದ್ಯರನ್ನು ಒಳಗೊಂಡ ಆಸ್ಪತ್ರೆಯು ಸ್ತ್ರೀರೋಗ, ಜನರಲ್‌ ಮೆಡಿಸಿನ್‌, ಜನರಲ್‌ ಸರ್ಜರಿ, ಮಕ್ಕಳ ವಿಭಾಗ, ಎಲುಬು ಮತ್ತು ಮೂಳೆ ವಿಭಾಗ ಮುಂತಾದ ಹೊರರೋಗಿ ವಿಭಾಗ ಹಾಗೂ ಸುಸಜ್ಜಿತ ಸೌಲಭ್ಯಗಳ ಒಳರೋಗಿ ವಿಭಾಗ, ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಡೊಪ್ಲರ್‌ ಸ್ಕಾ Âನ್‌, ಸುಸಜ್ಜಿತ ಆಪರೇಶನ್‌ ಥಿಯೇಟರ್‌, ನವೀನ ತಾಂತ್ರಿಕತೆಯ ಲ್ಯಾಬೋರೇಟರಿ, ಅತ್ಯುತ್ತಮ ನರ್ಸಿಂಗ್‌ ಕೇರ್‌, ಪರಿಣಾಮಕಾರಿ ಎಕ್ಸ್‌ರೇ ವಿಭಾಗ, ಅಪಘಾತ-ತುರ್ತು ಚಿಕಿತ್ಸಾ ಘಟಕ, ಐಎಫ್ ಸೆಂಟರ್‌ ಹಾಗೂ ಇನ್ನಿತರ ಆಧುನಿಕ ಸೌಲಭ್ಯಗಳನ್ನು ಹೊಂದಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಟಿ.ಎಸ್‌. ರಾವ್‌ ಅವರು ಪ್ರಸ್ತಾವನೆಯಲ್ಲಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next