Advertisement

ಮಧುಮೇಹ ನಿವಾರಣ್‌ ಆಯುರ್ವೇದ ಔಷಧ ಬಿಡುಗಡೆ

06:37 AM Feb 07, 2019 | |

ಬೆಂಗಳೂರು: ಬೆಂಗಳೂರಿನ ಖ್ಯಾತ ಆನಂದ ಗುರೂಜಿ ಸಿದ್ಧಿಪೀಠಂ ತಯಾರಿಸಿರುವ‌ ಮಧುಮೇಹ ಕಾಯಿಲೆ ಹತೋಟಿಯಲ್ಲಿಡುವ ಮಧುಮೇಹ ನಿವಾರಣ್‌ ಆಯುರ್ವೇದ ಔಷಧವನ್ನು ಬಿಡುಗಡೆ ಮಾಡಿದೆ.

Advertisement

ಇತ್ತೀಚೆಗೆ ಮಂಗಳೂರು ಮಹಾನಗರದಲ್ಲಿ ಮನುಕುಲದ ಉದ್ಧಾರಕ್ಕಾಗಿ ನಡೆದ ಶ್ರೀ ಧನ್ವಂತರಿ ಮಹಾಯಾಗ ಸಂದರ್ಭದಲ್ಲಿ ಕೋಡಿಮಠದ ಶ್ರೀ ಡಾ. ಶಿವಾನಂದ ರಾಜೇಂದ್ರ ಮಹಾಸ್ವಾಮಿಯವರು ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದರು. ಮಹರ್ಷಿ ಡಾ. ಶ್ರೀ ಆನಂದ ಗುರೂಜಿ ಅವರು ಡಯಾಬಿಟಿಸ್‌ ಕಾಯಿಲೆಗೆ ಬಳಸಬಹುದಾದ ಈ ಅಪೂರ್ವ ಔಷಧದ ಬಗ್ಗೆ ಮಾತನಾಡಿದರು. ಸಂಪೂರ್ಣ ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಾದ ಮಧುಮೇಹ್‌ ನಿವಾರಣ್‌ ಎಲ್ಲ ವಯಸ್ಸಿನವರೂ ಸೇವಿಸಬಹುದಾದ ರಾಮಬಾಣ ಔಷಧ ಎನ್ನಬಹುದು ಎಂದರು. ಈ ವೇಳೆ ಅಮೃತಬಿಂದು ಸೇರಿದಂತೆ ಅನೇಕ ಆಯುರ್ವೇದ ಉತ್ಪನ್ನಗಳ ವಿತರಕ ಸಂಸ್ಥೆ ಎ ಆ್ಯಂಡ್‌ ಜೆ ಹೆಲ್ತ್‌ಕೇರ್‌ನ ಆಡಳಿತ ನಿರ್ದೇಶಕ ಸಿ.ಆರ್‌. ಜೋಶಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next