Advertisement

Udupi: ಮಧುಮೇಹ, ರಕ್ತದೊತ್ತಡ: ಶಿಕ್ಷಕ ಸಾವು

11:34 PM Feb 03, 2024 | Team Udayavani |

ಉಡುಪಿ: ಮಧುಮೇಹ, ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದ ಸರಕಾರಿ ಶಾಲೆಯ ಶಿಕ್ಷಕ ಜೆ. ಸತ್ಯಶಂಕರ (59) ಸಾವನ್ನಪ್ಪಿದ್ದಾರೆ.

Advertisement

ಚಿತ್ರಕಲಾ ಶಿಕ್ಷಕರಾಗಿದ್ದ ಇರುವ ಮಲ್ಪೆ ಸರಕಾರಿ ಶಾಲೆ, 2015ರಿಂದ ಈವರೆಗೆ ಬೋರ್ಡ್‌ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ ವೃತ್ತಿ ಮಾಡಿಕೊಂಡಿದ್ದರು. ಕಾಯಿಲೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಫೆ. 2ರಂದು 76 ಬಡಗಬೆಟ್ಟುವಿನ ಮನೆಯಲ್ಲಿ ಊಟ ಮಾಡಿದ ಬಳಿಕ ಕೆಮ್ಮು ಬಂದಿದ್ದು, ಉಸಿರಾಡಲು ಕಷ್ಟವಾಗುವುದಾಗಿ ತಿಳಿಸಿದ್ದರು. ಅದರಂತೆ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಪರೀಕ್ಷಿಸಿ ಅವರು ಸಾವನ್ನಪ್ಪಿರುವುದಾಗಿ ತಿಳಿಸಿದರು. ಅವಿವಾಹಿತರಾಗಿದ್ದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next