Advertisement

ಪೊಲೀಸರನ್ನೇ ಸುಟ್ಟು ಹಾಕುವ ಬೆದರಿಕೆ ಒಡ್ಡಿದ್ದ ಧುಳೆ ಉದ್ರಿಕ್ತ ಸಮೂಹ

04:52 PM Jul 07, 2018 | Team Udayavani |

ಧುಳೆ, ಮಹಾರಾಷ್ಟ್ರ : ರೈನ್‌ಪಾಡಾ ಗ್ರಾಮದಲ್ಲಿ ಮಕ್ಕಳ ಕಳ್ಳರೆಂದು ಶಂಕಿಸಿ ಐವರನ್ನು ಚಚ್ಚಿ ಕೊಂದ ಉದ್ರಿಕ್ತ ಜನರ ಗುಂಪು ಪೊಲೀಸರನ್ನು ಮತ್ತು ಅವರ ವಾಹನವನ್ನು ಸುಟ್ಟು ಹಾಕುವ ಬೆದರಿಕೆಯನ್ನು ಒಡ್ಡಿತ್ತು ಎಂಬ ವಿಷಯ ಈಗ ಗೊತ್ತಾಗಿದೆ.

Advertisement

‘ಮಕ್ಕಳ ಕಳ್ಳರು ನಮ್ಮ ಕೈಯಲ್ಲಿ ಸಾಯುವುದನ್ನು ನಾವು ಕಾಣಲು ನೀವು ತಡೆದಲ್ಲಿ ನಿಮ್ಮನ್ನೇ ನಾವು ಸುಟ್ಟು ಕೊಲ್ಲುತ್ತೇವೆ’ ಎಂಬ ಬೆದರಿಕೆಯನ್ನು ಉದ್ರಿಕ್ತರು ತಮಗೆ ಹಾಕಿದ್ದರು ಎಂದು ಓರ್ವ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. 

ಕಳೆದ ಜು.1ರಂದು ಧುಳೆ ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ರೈನ್‌ಪಾಡಾ ಗ್ರಾಮದಲ್ಲಿ ಉದ್ರಿಕ್ತರ ಗುಂಪೊಂದು ಮಕ್ಕಳ ಕಳ್ಳರೆಂದು ಭಾವಿಸಿ ನಾಥ ಗೋಸಾವಿ ಸಮುದಾಯದ ಐವರನ್ನು ಹೊಡೆದು ಸಾಯಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next