Advertisement

ವಿಮಾನ ದುರಂತದಿಂದ ಪಾರಾದ ಧ್ರುವ ಸರ್ಜಾ: ದೇವರಿಗೆ ಧನ್ಯವಾದ ಹೇಳಿದ ʼಮಾರ್ಟಿನ್‌ʼ ತಂಡ

11:01 AM Feb 20, 2024 | Team Udayavani |

ಬೆಂಗಳೂರು: ಸ್ಯಾಂಡಲ್‌ ವುಡ್‌ ನಟ ಧ್ರುವ ಸರ್ಜಾ ಹಾಗೂ ʼಮಾರ್ಟಿನ್‌ʼ ಚಿತ್ರತಂಡ ಸಂಚರಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಚಿತ್ರತಂಡ ಪಾರಾಗಿದೆ.

Advertisement

ಎ.ಪಿ ಅರ್ಜುನ್‌ ಅವರ ನಿರ್ದೇಶನದ ʼಮಾರ್ಟಿನ್‌ʼ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ಚಿತ್ರತಂಡದೊಂದಿಗೆ ಧ್ರುವ ಸರ್ಜಾ  ಶ್ರೀನಗರಕ್ಕೆ ತೆರಳುತ್ತಿದ್ದರು. ಅಲ್ಲಿ ಚಿತ್ರೀಕರಣ ಮುಗಿಸಿ ದೆಹಲಿಗೆ ವಾಪಾಸಾಗುವ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಆದರೆ ಸೂಕ್ತ ಸಮಯದಲ್ಲಿ ಪೈಲೆಟ್‌ ದುರಂತವನ್ನು ತಪ್ಪಿಸಿ ಸುರಕ್ಷಿತವಾಗಿ ಲ್ಯಾಂಡ್‌ ಮಾಡಿದ್ದಾರೆ.

ಸುರಕ್ಷಿತವಾಗಿ ವಿಮಾನ ಲ್ಯಾಂಡ್‌ ಆದ ಬಳಿಕ ವಿಮಾನದೊಳಗಿನಿಂದಲೇ ʼಮಾರ್ಟಿನ್ʼ ಚಿತ್ರತಂಡ ಸಮಯ ಪ್ರಜ್ಞೆ ಮೆರೆದ ಪೈಲೆಟ್‌ ಗೆ ಧನ್ಯವಾದ ಹೇಳಿದೆ.

” ಕಟ್ಟ ಅನುಭವ ಇವತ್ತು ಆಗಿದ್ದು. ಜೀವನದಲ್ಲಿ ಇಂತಹ ಕೆಟ್ಟ ಅನುಭವ ಆಗಿರಲಿಲ್ಲ. ದೇವರಿಗೆ ಧನ್ಯವಾದ ತಿಳಿಸಬೇಕು. ಜೈ ಆಂಜನೇಯ” ಎಂದು ಧ್ರುವಾ ಸರ್ಜಾ ವಿಡಿಯೋದಲ್ಲಿ ಹೇಳಿದ್ದಾರೆ.

ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಸಿನಿಮಾಕ್ಕಿದೆ. ಸಿನಿಮಾದ ಕೊನೆ ಹಂತದ ಚಿತ್ರೀಕರಣ ನಡೆಯುತ್ತಿದೆ.

Advertisement

ಧ್ರುವ ವೃತ್ತಿ ಬದುಕಿನ ಮತ್ತೊಂದು ಬಹು ನಿರೀಕ್ಷಿತ ದುಬಾರಿ ಸಿನಿಮಾಗಳಲ್ಲಿ ಒಂದಾಗಿರುವ ʼಮಾರ್ಟಿನ್‌ʼ ನಲ್ಲಿ ಕನ್ನಡದ ಕಲಾವಿದರ ಜೊತೆ ಟಾಲಿವುಡ್‌, ಕಾಲಿವುಡ್‌  ಹಾಗೂ ಬಿಟೌನ್‌ ಕಲಾವಿದರು ಕೂಡ ನಟಿಸಿದ್ದಾರೆ. ವೈಭವಿ ಶಾಂಡಲ್ಯ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next