Advertisement

Team India; ಶ್ರೀಶಾಂತ್‌ ವಿರುದ್ಧ ಧೋನಿ ಸಿಟ್ಟು: ಆತ್ಮಚರಿತ್ರೆಯಲ್ಲಿ ಅಶ್ವಿ‌ನ್‌ ಉಲ್ಲೇಖ

12:48 PM Jul 14, 2024 | Team Udayavani |

ನವದೆಹಲಿ: ಮಾಜಿ ವೇಗಿ ಎಸ್‌. ಶ್ರೀಶಾಂತ್‌ ಅವರನ್ನು 2010ರಲ್ಲಿ ದಕ್ಷಿಣ ಆಫ್ರಿಕಾ ಸರಣಿಯ ಅರ್ಧದಿಂದಲೇ ತವರಿಗೆ ಕಳುಹಿಸಲು ಭಾರತದ ಮಾಜಿ ನಾಯಕ ಎಂ.ಎಸ್‌.ಧೋನಿ ಮುಂದಾಗಿದ್ದರು ಎಂದು ಸ್ಪಿನ್ನರ್‌ ಆರ್‌.ಅಶ್ವಿ‌ನ್‌ ವಿಚಾರವೊಂದರನ್ನು ಬಹಿರಂಗ ಪಡಿಸಿದ್ದಾರೆ.

Advertisement

ತನ್ನ ಆತ್ಮ ಚರಿತ್ರೆ “ಐ ಹ್ಯಾವ್‌ ದ ಸ್ಟ್ರೀಟ್ಸ್‌-ಅ ಕುಟ್ಟಿ ಕ್ರಿಕೆಟ್‌ ಸ್ಟೋರಿ’ಯಲ್ಲಿ ಅಶ್ವಿ‌ನ್‌, ಧೋನಿಯ ಶಿಸ್ತಿನ ಬಗ್ಗೆ ಉಲ್ಲೇಖೀಸಿದ್ದಾರೆ.

ಪ್ರವಾಸ ಸರಣಿಗಾಗಿ ದ.ಆಫ್ರಿಕಾಕ್ಕೆ ಧೋನಿ ಪಡೆ ತೆರಳಿತ್ತು. ಈ ಸಂದರ್ಭ, ಪಂದ್ಯ ನಡೆಯುವ ವೇಳೆ ಮೀಸಲು ಆಟಗಾರರು ಇತರ ಆಟಗಾರರ ಜೊತೆ ಡಗ್‌ಔಟ್‌ನಲ್ಲಿರಬೇಕು ಎಂದಿದ್ದ ಧೋನಿ ಮಾತನ್ನು ಮೀರಿದ್ದ ಶ್ರೀಶಾಂತ್‌ ವಿರುದ್ಧ, ಧೋನಿ ಸಿಟ್ಟಾಗಿದ್ದರು ಎಂದು ಅಶ್ವಿ‌ನ್‌ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next