Advertisement

“ಧೋನಿ ಮತ್ತೆ ಟೀಮ್‌ ಇಂಡಿಯಾಗೆ ಮರಳಬೇಕು’

11:48 PM May 10, 2020 | Sriram |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಮತ್ತೇ ತಂಡಕ್ಕೆ ಮರಳಬೇಕು ಎಂದು ಯುವ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಹೇಳಿದ್ದಾರೆ.

Advertisement

ಧೋನಿ ಅವರನ್ನು ತಂಡದಲ್ಲಿ ಬಹಳ ಮಿಸ್‌ ಮಾಡಿಕೊಂಡಿದ್ದೇವೆ. ಹಿರಿಯ ಆಟಗಾರರ ಜತೆ ಆಡಿದಾಗ ಒಂದು ಬಾಂಧವ್ಯ ಬೆಳೆಯುತ್ತದೆ. ಅವರ ಇರುವಿಕೆಯನ್ನು ಸದಾ ಬಯಸುವಂತಾಗುತ್ತದೆ. ಇನ್ನು ನಿವೃತ್ತಿ ಅವರ ವೈಯಕ್ತಿಕ ನಿರ್ಧಾರ, ಅದನ್ನು ಅವರಿಗೆ ಬಿಡಬೇಕು. ಈಗಲೂ ಧೋನಿ ಅದ್ಭುತ ಫಿಟ್‌ನೆಸ್‌ ಹೊಂದಿದ್ದಾರೆ. ಅವರಲ್ಲಿ ಭಾರತ ತಂಡದ ಪರ ಆಟ ಮುಂದುವರಿಸುವ ಸಾಮರ್ಥ್ಯ ಇದೆ. ನಾನು ಅವರ ಬಹುದೊಡ್ಡ ಅಭಿಮಾನಿ ಎಂದು ಕುಲದೀಪ್‌ ಹೇಳಿದ್ದಾರೆ..

 

Advertisement

Udayavani is now on Telegram. Click here to join our channel and stay updated with the latest news.

Next