Advertisement

ಎಲ್ಲವೂ ಧೋನಿಗೆ ಬಿಟ್ಟ ನಿರ್ಧಾರ: ಗಂಗೂಲಿ

12:12 AM Dec 31, 2019 | Sriram |

ಹೊಸದಿಲ್ಲಿ: “ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಬಗ್ಗೆ ಸದ್ಯಕ್ಕೆ ಯಾವ ವಿಚಾರವನ್ನೂ ಸ್ಪಷ್ಟಪಡಿಸಿಲ್ಲ. ಭವಿಷ್ಯದಲ್ಲಿ ಕ್ರಿಕೆಟ್‌ ಆಡುವುದು ಅಥವಾ ಬಿಡುವುದು ಅವರಿಗೇ ಬಿಟ್ಟ ವಿಚಾರ’ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

Advertisement

“ಸದ್ಯ ಧೋನಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಆಯ್ಕೆಗಾರರ ಜತೆ ಸಂವಹನ ನಡೆಸಲಿದ್ದಾರೆ. ಈ ವೇಳೆ ಸೂಕ್ತ ತೀರ್ಮಾನವೊಂದನ್ನು ತೆಗೆದುಕೊಳ್ಳಲಿದ್ದಾರೆ ಎಂದು ನಂಬಿದ್ದೇನೆ. ಧೋನಿ ಚಾಂಪಿಯನ್‌ ಕ್ರಿಕೆಟಿಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಮತ್ತೋರ್ವ ಧೋನಿ ಬೇಗ ನಮಗೆ ಸಿಗುವುದಿಲ್ಲ’ ಎಂದು ಗಂಗೂಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next