Advertisement

Dharwad: ಅನೈತಿಕ ಸಂಬಂಧಕ್ಕೆ ಅಡ್ಡಿ; ವಿಕಲಚೇತನ ಬಾಲಕಿಯ ಕೊಲೆ

10:47 PM Feb 08, 2024 | Team Udayavani |

ಧಾರವಾಡ : ಐದು ವರ್ಷದ ವಿಕಲಚೇತನ ಬಾಲಕಿಯ ಕುತ್ತಿಗೆ ಇರಿದು ಕೊಲೆ ಮಾಡಿರುವ ಘಟನೆ ನಗರದ ಕಮಲಾಪೂರದ ಹೂಗಾರ ಓಣಿಯ ಗುರುವಾರ ನಡೆದಿದೆ.

Advertisement

ಸಹನಾ ಹಿರೇಮಠ(5) ಕೊಲೆಯಾದ ಬಾಲಕಿ. ಕುತ್ತಿಗೆ ಭಾಗಕ್ಕೆ ಗಾಯಗೊಂಡ ಸ್ಥಿತಿಯಲ್ಲಿ ಬಾಲಕಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಳೆ. ಬಾಲಕಿಯ ಕುತ್ತಿಗೆ ಹರಿತ ವಸ್ತುವಿನ ಮೂಲಕ ಇರಿದು ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದೆ.

ಬಾಲಕಿಯ ತಾಯಿ ಜ್ಯೋತಿ ಕಲ್ಲಯ್ಯ ಹಿರೇಮಠ ಹಾಗೂ ಆಕೆಯ ಪ್ರಿಯಕರ ರಾಹುಲ್ ನಡುವೆ ಅನೈತಿಕ ಸಂಬಂಧವಿತ್ತು. ಈ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ. ಹೀಗಾಗಿ ಸಹನಾಳ ತಾಯಿ ಜ್ಯೋತಿಯ ಜತೆಗೆ ರಾಹುಲ್ ಜೋಡಿಯನ್ನು ಉಪನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಈ ತನಿಖೆಯ ಬಳಿಕವೇ ಈ ಕೊಲೆಯ ಸತ್ಯಾಂಶ ಬಯಲಿಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next