Advertisement

Dharwad: ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ: ಶಾಸಕ ಅರವಿಂದ ಬೆಲ್ಲದ್‌ ಭವಿಷ್ಯ

09:56 PM Sep 30, 2024 | Team Udayavani |

ಧಾರವಾಡ: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಭ್ರಷ್ಟಾಚಾರ ರಾಜ್ಯದ ಜನತೆಗೆ ಗೊತ್ತಿದ್ದು, ಹೀಗಾಗಿ ಕೆಲವೇ ದಿನಗಳಲ್ಲಿ ನಮ್ಮ ರಾಜ್ಯಕ್ಕೆ ಹೊಸ ಸಿಎಂ ಬರುತ್ತಾರೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್‌  ಭವಿಷ್ಯ ನುಡಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭ್ರಷ್ಟಾಚಾರದಲ್ಲಿಯೇ ಮುಳುಗಿರುವ ಕಾಂಗ್ರೆಸ್ ನಾಯಕರೇ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಸಿಎಂ ಹಾಗೂ ಇಡೀ ಕಾಂಗ್ರೆಸ್ ಪರಿವಾರವೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅದಕ್ಕಾಗಿಯೇ ಸಿಎಂ ಅವರಿಗೆ ಈಗ ಇಂತಹ ಸ್ಥಿತಿ ಬಂದಿದೆ ಎಂದರು.

ಚುನಾವಣಾ ಬಾಂಡ್‌ ಎಫ್‌ಐಆರ್‌ ಸೇಡಿನ ರಾಜಕಾರಣ:
ಚುನಾವಣಾ ಬಾಂಡ್ ಮುಂದಿಟ್ಟು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರ ವಿರುದ್ದ ದೂರು ದಾಖಲು ಮಾಡಿರುವ ಸಿಎಂ ಸಿದ್ದರಾಮಯ್ಯ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಅಷ್ಟೇ. ಕಾನೂನು ಅಡಿಯ ವ್ಯವಸ್ಥೆಯಲ್ಲಿಯೇ ಹಣ ಪಡೆಯಲಾಗಿದೆ. ಇದರಡಿ ಕಾಂಗ್ರೆಸ್ 1,500 ಕೋಟಿ, ಟಿಎಂಸಿ 1600, ಡಿಎಂಕೆ 1,100  ಕೋಟಿ ಪಡೆದಿದ್ದು, ಹಾಗಾದರೆ ಈ ಪಕ್ಷಗಳ ಮೇಲೆ ಏಕೆ ದೂರು ದಾಖಲಿಸಿಲ್ಲ ಎಂದು ಪ್ರಶ್ನಿಸಿದರು.

ಉದ್ಯಮಿಗಳು ಕಾನೂನು ಅಡಿ ಪಕ್ಷಗಳಿಗೆ ದೇಣಿಗೆ ನೀಡಿದ್ದು, ಆದರೆ ಸಿಎಂ ಹಾಗೂ ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಸಿಎಂಗೆ ನಾನು ವಿನಂತಿ ಮಾಡುತ್ತೇನೆ. ಮೊದಲು ನೀವು ಹೋಗಿ ರಾಹುಲ್ ಗಾಂಧಿ ಮೇಲೆ ದೂರು ದಾಖಲಿಸಿರಿ. ಅವರೂ ರೂ.1500 ಕೋಟಿ ದೇಣಿಗೆ ಪಡೆದಿದ್ದಾರೆ. ಇವರ ಜತೆಗೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರ ಮೇಲೂ ಹಾಕಿ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next