Advertisement

ಧಾರವಾಡ :ಡಿವೈಎಸ್‌ಪಿ  ಶ್ರವಣ್‌  ಗಾಂವ್ಕರ್‌ ಹೃದಯಾಘಾತದಿಂದ ನಿಧನ 

04:02 PM Aug 28, 2018 | |

ಧಾರವಾಡ: ಜಿಲ್ಲಾ ಮೀಸಲು ಪೊಲೀಸ್‌ ಪಡೆಯ ಡಿವೈಎಸ್‌ಪಿ ಶ್ರವಣ್‌ ಗಾಂವ್ಕರ್‌ ಅವರು ಮಂಗಳವಾರ ಬೆಳಗಿನ ಜಾವ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 42 ವರ್ಷ ಪ್ರಾಯವಾಗಿತ್ತು. 

Advertisement

ಧಾರವಾಡದ ರಜತಗಿರಿ ಬಡಾವಣೆಯ ನಿವಾಸದಲ್ಲಿದ್ದ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೆ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯದಲ್ಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. 

ಗಾಂವ್ಕರ್‌ ಅವರಿಗೆ ಇಬ್ಬರು ಪುಟ್ಟ ಮಕ್ಕಳಿದ್ದು, ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ. 

ಪೊಲೀಸ್‌ ಅಧಿಕಾರಿಗಳು, ಸಹುದ್ಯೋಗಿಗಳು ನೆಚ್ಚಿನ ಅಧಿಕಾರಿಯ ನಿಧನಕ್ಕೆ ತೀವ್ರ ಕಂಬನಿ ಮಿಡಿದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next