Advertisement

Dharwad: ನಾನು ಸಿಎಂ ಆಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್‌!

11:28 PM Oct 13, 2024 | Team Udayavani |

ಧಾರವಾಡ: ಸಿಎಂ ಬದಲಾವಣೆ ಎಂಬ ಕೂಗಿನ ಬೆನ್ನಲ್ಲೇ “ನಾನು ಮುಖ್ಯಮಂತ್ರಿಯಾಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ’ ಎಂದು ಉಪ ಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ್‌ ಹೇಳಿದ ಮಾತು ಚರ್ಚೆಗೆ ಗ್ರಾಸವೊದಗಿಸಿತು.

Advertisement

ಇಲ್ಲಿಯ ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ರವಿವಾರ ನಡೆದ ರಡ್ಡಿ ಸಹಕಾರಿ ಬ್ಯಾಂಕ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿಯೇ ಮಾತಿನ ಭರದಲ್ಲಿ ಆಡಿದ ಮಾತು ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು. ಸಹಕಾರಿ ಕ್ಷೇತ್ರದ ನಂಟು, ಕೆ.ಎಚ್‌.ಪಾಟೀಲರ ಒಡನಾಟ ಸ್ಮರಿಸಿದ ಡಿಸಿಎಂ, ನಾನು ಮುಖ್ಯಮಂತ್ರಿಯಾಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.

ಸಹಕಾರ ಕ್ಷೇತ್ರದ ನಾಯಕನಾಗಿ ಬಂದಿದ್ದು, ಈ ಕ್ಷೇತ್ರದಲ್ಲಿ ಶತಮಾನೋತ್ಸವ ಸಂಭ್ರಮದ ರಡ್ಡಿ ಬ್ಯಾಂಕ್‌ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು. ಈ ವೇಳೆ ಸಿಎಂ ಆಗಿ ಬಂದಿದ್ದೇನೆ ಎಂಬ ಡಿಸಿಎಂ ಮಾತು ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರಷ್ಟೇ ಅಲ್ಲದೇ ಸಭಿಕರು ಒಂದು ಕ್ಷಣ ಗೊಂದಲಕ್ಕೆ ಒಳಗಾಗುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next