Advertisement

ಧಾರವಾಡ:ಅಂತಿಮ ಸಂಸ್ಕಾರದ ವೇಳೆ ಎದ್ದು ಕುಳಿತ ಬಾಲಕನ ಶವ!

09:12 AM Feb 19, 2017 | |

ಧಾರವಾಡ : ಇಲ್ಲಿನ ಮನಗುಂಡಿ ಎಂಬಲ್ಲಿ ಪವಾಡ ವೊಂದು ನಡೆದಿದ್ದು, ಬೀದಿ ನಾಯಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನೊಬ್ಬ ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ ಬಳಿಕ ಅಂತ್ಯಸಂಸ್ಕಾರ ನಡೆಸುವ ವೇಳೆ ಚಟ್ಟದಿಂದ ಎದ್ದುಕುಳಿತ ವಿಸ್ಮಯಕಾರಿ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. 

Advertisement

16 ವರ್ಷ ಪ್ರಾಯದ ಕುಮಾರ್‌ ಮರಡಿ ಎಂಬ ಬಾಲಕ ಬೀದಿ ನಾಯಿ ಗಳ ದಾಳಿಯ ಬಳಿಕ ಮೂರ್ಛೆ ತಪ್ಪಿದ್ದು ಆಸ್ಪತ್ರೆಗೆ ದಾಖಲಾಗಿತ್ತು. ಅಲ್ಲಿ ನಾಡಿ ಮಿಡಿತ ಮತ್ತು ಉಸಿರಾಟ ನಿಂತಿದ್ದರಿಂದ ವೈದ್ಯರು ಮೃತ ಪಟ್ಟಿರುವುದಾಗಿ ಘೋಷಿಸಿದ್ದರು. ಮನೆಯವರು ಶವವನ್ನು ತಂದು ಅಂತಿಮ ಸಂಸ್ಕಾರ ನಡೆಸುತ್ತಿದ್ದ ವೇಳೆ ಕುಮಾರ್‌ ಚಟ್ಟದಿಂದ ಎದ್ದುಕುಳಿತಿದ್ದಾನೆ. 

ಶವ ಎದ್ದುಕುಳಿತದ್ದನ್ನು ನೋಡಿ ಕೆಲವರು ದಂಗಾಗಿ ಹೋದರೆ, ಮನೆಯವರು ಕಳೆದುಕೊಂಡಿದ್ದ ಮಗನನ್ನು ಮತ್ತೆ ಪಡೆದು ಸಂಭ್ರಮ ಪಟ್ಟರು. ಇದೀಗ ಕುಮಾರ್‌ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next