Advertisement

ಶ್ರೀಕ್ಷೇತ್ರ ಧರ್ಮಸ್ಥಳ ಪತ್ತನಾಜೆ ಉತ್ಸವ ಸಮಾಪನ, ವಿಶೇಷ ಪೂಜೆ

03:15 PM May 27, 2019 | keerthan |

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪತ್ತನಾಜೆ (ಹತ್ತನಾಜೆ) ಉತ್ಸವವು ಭಕ್ತಿ ಸಂಭ್ರಮದಿಂದ ಶನಿವಾರ ರಾತ್ರಿ ಸಮಾಪನಗೊಂಡಿತು.

Advertisement

ಶ್ರೀಕ್ಷೇತ್ರ ಧರ್ಮಸ್ಥಳ ಮೇಳದ ಪ್ರಸಕ್ತ ಸಾಲಿನ ತಿರುಗಾಟ ಕೊನೆಗೊಂಡು ಮೇ 25ರಂದು ಸಂಜೆ ಮೇಳದ ಶ್ರೀ ಮಹಾಗಣಪತಿಯನ್ನು ಶ್ರೀ ಮಂಜುಕೃಪಾದಿಂದ ವೈಭವದ ಮೆರವಣಿಗೆಯಲ್ಲಿ ಶ್ರೀಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು.

ಕೇರಳದ ಚೆಂಡೆ ಮೇಳ, ವಾದ್ಯ, ಶಂಖ, ಜಾಗಟೆ, ಕ್ಷೇತ್ರದ ಬಿರುದಾವಳಿಗಳು, ಆನೆಗಳು, ಬಸವ, ಹೂವಿನ ಕೋಲು ಮೆರವಣಿಗೆಯ ಶೋಭೆ ಹೆಚ್ಚಿಸಿತು.

ವಿಶೇಷ ಪೂಜೆ
ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಮಹಾ ಗಣಪತಿ ಉತ್ಸವ ಸಾಗಿ ಛತ್ರ ಮಹಾಗಣಪತಿ ದೇಸ್ಥಾನಕ್ಕೆ ಪ್ರವೇಶಿಸಿತು. ಛತ್ರದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್‌, ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ಶ್ರದ್ಧಾ ಅಮಿತ್‌ ಮತ್ತು ಕ್ಷೇತ್ರದ ಸಿಬಂದಿ, ಭಕ್ತರು ಭಾಗವಹಿಸಿದರು.

Advertisement

ರಾತ್ರಿ ವಿಶೇಷ ಉತ್ಸವದೊಂದಿಗೆ ವಾರ್ಷಿಕ ಉತ್ಸವ, ವಿಶೇಷಗಳು ಸಮಾಪನಗೊಂಡವು.

Advertisement

Udayavani is now on Telegram. Click here to join our channel and stay updated with the latest news.

Next