Advertisement

Dharmasthala-Nidle; ಕಾಡಾನೆಗೆ ಹೆದರಿ ಬಸ್ಸಿಗೆ ಢಿಕ್ಕಿಯಾದ ಸ್ಕೂಟರ್‌ ಸವಾರ

12:54 AM Aug 16, 2024 | Team Udayavani |

ಬೆಳ್ತಂಗಡಿ: ತೋಟದಲ್ಲಿದ್ದ ಕಾಡಾನೆಯೊಂದನ್ನು ಅರಣ್ಯಾಧಿಕಾರಿಗಳು ಅಟ್ಟಿಸುತ್ತಿದ್ದಾಗ ಹೆದರಿ ವಿಚಲಿತಗೊಂಡ ಸ್ಕೂಟಿ ಸವಾರ ರೊಬ್ಬರು ಸರಕಾರಿ ಬಸ್‌ಗೆ ಢಿಕ್ಕಿ ಹೊಡೆದ ಘಟನೆ ಧರ್ಮಸ್ಥಳ-ನಿಡ್ಲೆ ಮಾರ್ಗದ ಬೋಳಿಯಾರಿನಲ್ಲಿ ಆ. 15ರಂದು ಬೆಳಗ್ಗೆ 7.40ರ ಹೊತ್ತಿಗೆ ಸಂಭವಿಸಿದೆ.

Advertisement

ಘಟನೆಯಲ್ಲಿ ಧರ್ಮಸ್ಥಳ – ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಶಿಡ್ಲಘಟ್ಟ ವಿಭಾಗದ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ಹಾಗೂ ಸ್ಕೂಟರ್‌ಗೆ ಹಾನಿಯಾಗಿದೆ.

ಧರ್ಮಸ್ಥಳ-ಕೊಕ್ಕಡ ರಸ್ತೆಯಲ್ಲಿ ಪುದುವೆಟ್ಟು ಕ್ರಾಸ್‌ ದಾಟಿ ಮುಂದೆ ಹೋಗುವಾಗ ಬೋಳಿಯಾರ್‌ನಲ್ಲಿರುವ ಧರ್ಮಸ್ಥಳದ ತೆಂಗಿನ ತೋಟದ ಸಮೀಪ ಕಾಡಾನೆಯೊಂದು ರಸ್ತೆ ದಾಟುತ್ತಿತ್ತು. ಇದನ್ನು ಕಂಡು ಬಸ್‌ ಸಹಿತ ಎಲ್ಲ ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿದ್ದರು. ಆದರೆ ಸ್ಕೂಟರ್‌ ಸವಾರನೊಬ್ಬ ಮುಂದೆ ಚಲಿಸಿದ್ದರಿಂದ ಆನೆ ಹಿಮ್ಮೆಟ್ಟಿಸಿದೆ.

ಗಾಬರಿಗೊಂಡ ಸವಾರ ಬಸ್ಸಿಗೆ ಢಿಕ್ಕಿ ಹೊಡೆದಿರುವುದಾಗಿ ಧರ್ಮಸ್ಥಳ ಕೆಎಸ್‌ಆರ್‌ಟಿಸಿ ಡಿಪೋ ಮೇಲ್ವಿಚಾರಕರು ಪತ್ರಿಕೆಗೆ ತಿಳಿಸಿದ್ದಾರೆ. ಎರಡೂ ವಾಹನಗಳು ಸ್ವಲ್ಪ ಜಖಂಗೊಂಡಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next