Advertisement

ಧರ್ಮಸ್ಥಳ ಗ್ರಾ.ಪಂ: ಮತದಾನ ಜಾಗೃತಿ

09:09 PM Apr 13, 2019 | Team Udayavani |

ಬೆಳ್ತಂಗಡಿ: ಲೋಕಸಭಾ ಚುನಾವಣೆ ಪ್ರಯುಕ್ತ ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಡ್ಡಾಯ ಮತದಾನದ ಜಾಗೃತಿಗೆ ಸೈಕಲ್‌ ಜಾಥಾ ಜರಗಿತು. ಧರ್ಮಸ್ಥಳ ಕ್ಷೇತ್ರದ ಪ್ರಸಾದ ವಿಭಾಗ ಮುಖ್ಯಸ್ಥ, ನಿವೃತ್ತ ಪಂಚಾಯತ್‌ಅಭಿವೃದ್ಧಿ ಅಧಿಕಾರಿ ರತ್ನರಾಜ್‌ ಹೆಗ್ಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಡ್ಡಾಯ ಮತದಾನ ಮಾಡುವಂತೆ ಕರೆ ನೀಡಿದರು.

Advertisement

75 ಜಿಲ್ಲೆಗಳಲ್ಲಿ ಕಡ್ಡಾಯ ಮತದಾನ ಕುರಿತು ಸೈಕಲ್‌ ಜಾಥಾದಲ್ಲಿ ಜಾಗೃತಿ ಮೂಡಿಸುತ್ತಿರುವ ಉಮಾಪತಿ ಮೊದಲಿ ಯಾರ್‌ ಅವರನ್ನು ಗ್ರಾ.ಪಂ. ವತಿಯಿಂದ ಸಮ್ಮಾನಿಸಲಾಯಿತು. ಧರ್ಮಸ್ಥಳ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಉಮೇಶ್‌ ಕೆ., ಗ್ರಾ.ಪಂ. ಕಾರ್ಯದರ್ಶಿ ವಿಶ್ವನಾಥ್‌ ಧರ್ಮಸ್ಥಳ, ಬೂತ್‌ ಮಟ್ಟದ ಅಧಿಕಾರಿಗಳಾದ ದೇವಿಪ್ರಸಾದ್‌ ಬೊಳ್ಮ, ಹರೀಶ್‌, ವಂದನಾ ಬಲ್ಲಾಳ್‌, ಶಿವಾನಂದ, ಬಿಂದು, ಗ್ರಾ.ಪಂ.ಅ ಲೆಕ್ಕಾಧಿಕಾರಿ ದಿನೇಶ್‌ ಎಂ. ಹಾಗೂ ಧರ್ಮಸ್ಥಳ ದೇವಸ್ಥಾನದ ಪ್ರಸಾದ ವಿಭಾಗದ ಸಹಾಯಕ ಮ್ಯಾನೇಜರ್‌ ವಿಶ್ವನಾಥ್‌ ಹಾಗೂ ಪ್ರಸಾದ ವಿಭಾಗದ ಎಲ್ಲ ಸಿಬಂದಿ ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next