Advertisement

Dharmasthala ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮಗು ಸಾವು

01:50 AM May 04, 2024 | Team Udayavani |

ಬೆಳ್ತಂಗಡಿ: ತಾಯಿಯ ಜತೆ ನಿತ್ಯವೂ ಮನೆಯ ತೋಟದ ಕೆರೆಯ ಬಳಿಗೆ ಹೋಗುತ್ತಿದ್ದ ಒಂದು ವರ್ಷ ಒಂಭತ್ತು ತಿಂಗಳ ಗಂಡು ಮಗುವೊಂದು ತಾಯಿಗೆ ಅರಿವಿಲ್ಲದೆ ಕೆರೆಯ ಬಳಿ ಹೋಗಿದ್ದು, ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಪಟ್ಟೋಡಿಯಲ್ಲಿ ಸಂಭವಿಸಿದೆ.

Advertisement

ಇಲ್ಲಿನ ನಿವಾಸಿ ವೀರಪ್ಪ ಅವರ ಪುತ್ರ ಪ್ರಣೀತ್‌ ಮೃತಪಟ್ಟ ಮಗು. ಮಗು ಯಾವತ್ತೂ ತನ್ನ ತಾಯಿಯ ಜತೆ ಕೆರೆಯ ಬಳಿ ತೆರಳುತ್ತಿದ್ದ. ಶುಕ್ರವಾರ ತಂದೆ, ತಾಯಿ ಇಬ್ಬರೂ ಮನೆ ಕೆಲಸದಲ್ಲಿ ನಿರತರಾಗಿದ್ದಾಗ ಅವರ ಅರಿವಿಗೆ ಬಾರದೆ ಕೆರೆಯ ಬಳಿಗೆ ಮಗು ತೆರಳಿತ್ತು. ಮಗು ಕಾಣದಾದಾಗ ಹುಡುಕುತ್ತಾ ತಂದೆ ವೀರಪ್ಪ ಅವರು ಕೆರೆಯಲ್ಲಿ ಪರಿಶೀಲಿಸಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next