Advertisement

ಧರ್ಮಸ್ಥಳ: ಶಿವರಾತ್ರಿ ರಥೋತ್ಸವ

12:03 AM Feb 20, 2023 | Team Udayavani |

ಬೆಳ್ತಂಗಡಿ: ಮಹಾ ಶಿವರಾತ್ರಿಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ರವಿವಾರ ಬೆಳಗ್ಗಿನ ಜಾವ ಧರ್ಮಸ್ಥಳದಲ್ಲಿ ರಥೋತ್ಸವ ನೆರವೇರಿತು.

Advertisement

ಶನಿವಾರ ಸಂಜೆಯಿಂದ ಕ್ಷೇತ್ರದಲ್ಲಿ ರಾಜ್ಯದ ನಾನಾ ಕಡೆಗಳದ ಭಕ್ತರು ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಶಿವನಿಗೆ ಸೀಯಾಳಾಭಿಷೇಕ ವಿಶೇಷವಾಗಿತ್ತು. ದೇವರ ಬಲಿ ಉತ್ಸವ ನಡೆದು ರವಿವಾರ ಮುಂಜಾನೆ ಸ್ವಾಮಿಯ ರಥೋತ್ಸವ ನೆರವೇರಿತು.

ಶನಿವಾರದಿಂದ ರವಿವಾರ ಮುಂಜಾವಿನವರೆಗೆ ಭಕ್ತರು ಅಹೋರಾತ್ರಿ ಶಿವಪಂಚಾಕ್ಷರಿ ಪಠನ, ಭಜನೆ, ಪ್ರಾರ್ಥನೆಯೊಂದಿಗೆ ಜಾಗರಣೆ ಮಾಡಿದರು. ಬಳಿಕ ಸ್ವಾಮಿಯ ರಥೋತ್ಸವನ್ನು ವೀಕ್ಷಿಸಿದರು.

ಡಿ. ಹರ್ಷೇಂದ್ರ ಕುಮಾರ್‌, ಡಿ. ಸುರೇಂದ್ರ ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next