Advertisement

ಧರ್ಮಶಾಲಾ ವೀರ ಯೋಧರ ಪುಣ್ಯಭೂಮಿ : ಪ್ರಧಾನಿ ಮೋದಿ ಶ್ಲಾಘನೆ

03:21 PM Dec 27, 2018 | Team Udayavani |

ಧರ್ಮಶಾಲಾ : ‘ಧರ್ಮಶಾಲಾ ನನಗೆ ಮನೆಯ ಹಾಗೆ; ಇಲ್ಲಿ ಅನೇಕ ವರ್ಷಗಳ ಕಾಲ ನಾನು ಪಕ್ಷಕ್ಕಾಗಿ ಕೆಲಸ ಮಾಡಿಕೊಂಡಿದ್ದೆ. ಆಗ ರಾಜ್ಯಾದಂತ್ಯ ಓಡಾಡಿಕೊಂಡಿದ್ದ ನನಗೆ ಅನೇಕ ಅನುಭವಗಳಾಗಿವೆ; ಅನೇಕ ಹಿರಿಯ ನಾಯಕರೊಂದಿಗೆ ನಾನಿಲ್ಲಿ ಕೆಲಸ ಮಾಡಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 

Advertisement

ಹಿಮಾಚಲ ಪ್ರದೇಶದ ಜೈರಾಮ್‌ ಠಾಕೂರ್‌ ನೇತೃತ್ವದ ಬಿಜೆಪಿ ಸರಕಾರ ಒಂದು ವರ್ಷ ಪೂರೈಸಿರುವ ಪ್ರಯುಕ್ತ ಏರ್ಪಡಿಸಲಾಗಿದ್ದ ಜನ್‌ ಆಭಾರ್‌ ರಾಲಿಯಲ್ಲಿ ಮಾತನಾಡುತ್ತಿದ್ದ ಅವರು “ಹಿಮಾಚಲ ಪ್ರದೇಶವು ದೇಶದ ಗಡಿ ರಕ್ಷಣೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ವೀರ ಯೋಧರ ಪುಣ್ಯಭೂಮಿಯಾಗಿದೆ” ಎಂದು ವರ್ಣಿಸಿದರು. 

ಒಂದು ವರ್ಷದ ಆಡಳಿತೆಯನ್ನು ಯಶಸ್ವಿಯಾಗಿ ಪೂರೈಸಿರುವ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿ, ರಾಜ್ಯವು ದೇಶಕ್ಕೆ ಮಾದರಿಯಾಗಬೇಕಿದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next