Advertisement

ಜಿಲ್ಲಾಡಳಿತಕ್ಕೆ ಆಹಾರಧಾನ್ಯ-ಅಗತ್ಯ ವಸ್ತುಗಳ ಸಲ್ಲಿಕೆ

04:04 PM Apr 15, 2020 | Naveen |

ಧಾರವಾಡ: ನಗರದ ಅಸೋಶಿಯೇಶನ್‌ ಆಫ್‌ ಕನ್ಸ್‌ಲ್ಟಿಂಗ್‌ ಸಿವಿಲ್‌ ಇಂಜನಿಯರ್ ನ ಧಾರವಾಡ ಶಾಖೆ ವತಿಯಿಂದ ಆಹಾರ ಧಾನ್ಯ ಮತ್ತಿತರ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.

Advertisement

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರ ಸಮ್ಮುಖದಲ್ಲಿ ಅಕ್ಕಿ, ಒಳ್ಳೆ ಎಣ್ಣಿ, ಬೇಳೆ, ಸಕ್ಕರೆ, ಚಹಾಪುಡಿ ಮತ್ತಿತರ ಅಗತ್ಯ ವಸ್ತುಗಳನ್ನು ಸಾಂಕೇತಿಕವಾಗಿ ನೀಡಲಾಯಿತು. ಬಳಿಕ ಜಿಲ್ಲಾಡಳಿತ ನಿರ್ದೇಶನದಂತೆ ಇಲ್ಲಿನ ಸನ್ಮತಿ ಮಾರ್ಗದಲ್ಲಿನ ಡಾ| ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಸ್ಥಾಪಿಸಿರುವ ಸ್ವೀಕೃತಿ ಕೇಂದ್ರಕ್ಕೆ ಆಹಾರ ಧಾನ್ಯ ಸಲ್ಲಿಸಲಾಯಿತು.

ಎಸಿಸಿಇನ ವಿಜಯ ಹಳ್ಳಿಕೇರಿ, ಸುನೀಲ ಬಾಗೇವಾಡಿ, ವಿಜಯೇಂದ್ರ ಪಾಟೀಲ, ಕಬೀರ ನದಾಫ್‌, ಅರುಣ ಶೀಲವಂತ, ಅಶೋಕ ಕೌಜಗೇರಿ, ರಾಜಶೇಖರ ಇಟಗಿ, ವಿಜಯ ತೋಟಗೇರ, ಸೋಹನ ತೋಟಗೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next