Advertisement

ರಾಜಕಾರಣ-ಸಮಾಜಕ್ಕೆ ಧರಂಸಿಂಗ್‌ ಮಾದರಿ

10:07 AM Jul 28, 2020 | Suhan S |

ಕಲಬುರಗಿ: ಈ ಭಾಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವ ಮಾಜಿ ಮುಖ್ಯಮಂತ್ರಿ ಧರಂಸಿಂಗ್‌ ರಾಜಕಾರಣಕ್ಕೆ ಹಾಗೂ ಈ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಡಾ| ಎನ್‌. ಧರ್ಮಸಿಂಗ್‌ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಆಡಳಿತಾಧಿಕಾರಿ ಡಾ| ಕಿಶೋರಸಿಂಗ್‌ ಛತ್ರಪತಿ ಹೇಳಿದರು.

Advertisement

ನಗರದ ಡಾ| ಎನ್‌. ಧರಂಸಿಂಗ್‌ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಮೂರನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್ಯನ್‌ ಫಾರ್ಮಸಿ ಕಾಲೇಜ್‌ ಪ್ರಾಚಾರ್ಯ ಡಾ| ಶರಣಗೌಡ ಪಾಟೀಲ್‌, ಕಾಲೇಜ್‌ನ ಪ್ರಾಚಾರ್ಯ ಸತೀಶ, ಪ್ರಮುಖರಾದ ಭಜರಸಿಂಗ್‌ ಚವ್ಹಾಣ, ಅಮೃತ ತಿವಾರಿ, ಮುಕುಂದರಾವ, ಧನಂಜಯ, ಶ್ರೀನಿವಾಸ ಮೂರ್ತಿ, ಶ್ವೇತಾ ತಿವಾರಿ, ಅರ್ಪಣಾ, ಭಾಗ್ಯಶ್ರೀ. ಅಮೀನಬಾನು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next