Advertisement
ದೇವೇಂದ್ರನಾಗಿ ಪ್ರಕೃತಿ ಜೋಗಿ, ನಾಡಿಜಂಘನಾಗಿ ನಿಧೀಶ್ ಶೇಕ, ಮುರಾಸುರನಾಗಿ ರಂಜಿತಾ ಎಲ್ಲೂರು, ವಿಷ್ಣುವಾಗಿ ನಿಶಾ ದೇವಾಡಿಗ, ಗರುಡನಾಗಿ ರಕ್ಷಿತಾ ಎಲ್ಲೂರು ತಮ್ಮ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿ ಭೇಷ್ ಎನಿಸಿಕೊಂಡರು. ಪುಟಾಣಿ ಕಲಾವಿದರಾದ ವಿಶ್ವತೇಜ ಕುಂದೇಶ್ವರ, ಹನ್ಸಿಕಾ ವೈ, ರಿಶಿಕಾ ಕುಂದೇಶ್ವರ, ರಕ್ಷಿತಾ ಕದ್ರಿ, ಪ್ರಣವ್ ಕದ್ರಿ, ಅನಿಕೇತ್ ಹೆಬ್ಟಾರ್ ದೇವೇಂದ್ರ ಬಲಗಳಾಗಿ ಉತ್ತಮವಾದ ಪ್ರದರ್ಶನ ನೀಡಿದರು. ರಿತ್ವಿಕ್ ಹೆಬ್ಟಾರ್, ಅಮೃತವರ್ಣ, ಅಮೃತವರ್ಷ, ಅನಂತದೀಪ, ಶ್ರೀಕಾಂತ್ ಪುರಾಣಿಕ್ ಮತ್ತು ಆಯುಷ್ ವೈ ನಾಡಿಜಂಘನ ಬಲಗಳಾಗಿ ಅಬ್ಬರದ ರಂಗಪ್ರವೇಶ ವೇದಿಕೆಯನ್ನು ನಡುಗಿಸಿತು. ಮೇಘಮುಖೀಯ ಪಾತ್ರದಲ್ಲಿ ಕಾಣಿಸಿಕೊಂಡ ದುರ್ಗಾಶ್ರೀ ಉತ್ತಮವಾಗಿ ಪಾತ್ರ ನಿರ್ವಹಿಸಿದರು. ಅಷ್ಟಭುಜೆಯಾಗಿ ಅನನ್ಯಾ ಬಳಂತಿಮುಗರು ಪ್ರದರ್ಶನ ಉತ್ತಮವಾಗಿತ್ತು. ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡ ಪುಟಾಣಿ ಕಲಾವಿದೆ ರಿಶಿಕಾ ಕುಂದೇಶ್ವರ ಅವರು ಕಲಾರಸಿಕರನ್ನು ನಗೆಗಡಲಲ್ಲಿ ತೇಲಾಡಿಸಿದರು.
Advertisement
ಏಕಾದಶ ಸಂಭ್ರಮಕ್ಕೆ ಏಕಾದಶಿ ದೇವಿ ಮಹಾತ್ಮೆ
06:44 PM Mar 06, 2020 | mahesh |
Advertisement
Udayavani is now on Telegram. Click here to join our channel and stay updated with the latest news.