Advertisement

ಭಕ್ತಿ -ಭಾವದ ಸಂಗಮ ಗಾನಲಹರಿ 

02:54 PM Feb 02, 2018 | |

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಪಾರ್ವತಿ ಗಣೇಶ್‌ ಭಟ್‌ ಹೊಸಮೂಲೆ ಮತ್ತು ಅವರ ಪುತ್ರಿ ಶ್ರೀರಾಗ ಅವರು ನಡೆಸಿಕೊಟ್ಟ “ಗಾನ ಲಹರಿ’ ಭಕ್ತಿ ಭಾವನೆಗಳ ಸಂಗಮವಾಗಿ ರಂಜಿಸಿತು.

Advertisement

ಆರಂಭದಲ್ಲಿ ಹಾಡಿ¨ ವಂದನೆ ಕೋಟಿ ವಂದನೆ ನಮಿಪೆ ನರಹರಿಯ ಗೀತೆಗಳು ಸ್ತುತಿಪ್ರದವಾಗಿ ಮನ ಮುಟ್ಟಿತು. ಭುವನಂ ಗಗನಂ, ಕಾದಿರುವಳು ಶಬರಿ, ಕರುಣಾಳು ಬಾ ಬೆಳಕೆ ಹಾಡುಗಳು ಭಕ್ತಿ ಭಾವನೆಗಳ ದೀಪಧ್ವನಿಯಾಗಿ ಮೊಳಗಿತು.ಸಂತ ಶಿಶಿನಾಳ ಶರೀಫ‌ರ ಬಿದಿರು ನಾನ್ಯಾರಿಗಲ್ಲದವಳು ಗೀತೆಯನ್ನು ಪಾರ್ವತಿಯವರು ಹಾಡಿದರು.ಜನಪ್ರಿಯವಾಗಿರುವ ನೀಡು ಶಿವಾ ನೀಡದಿರು ಶಿವಾ ಗೀತೆಯನ್ನು ಶ್ರೀರಾಗ ಸ್ವಂತ ಶೈಲಿಯಲ್ಲಿ ಹಾಡಿ ರಂಜಿಸಿದರು. 

ಭಾಗ್ಯದ ಲಕ್ಷ್ಮೀ ಬಾರಮ್ಮ ಗೀತೆಯೊಂದಿಗೆ ಗಾನಲಹರಿ ಮುಕ್ತಾಯವಾಯಿತು. ಕೀಬೋರ್ಡ್‌ ವಾದಕರಾಗಿ ವಿಟ್ಲದ ಅರಮನೆಯ ಪ್ರಸಾದ ವರ್ಮ, ತಬಲಾದಲ್ಲಿ ಆತ್ಮರಾಮ ಮೈಸೂರು ಸಹಕರಿಸಿದರು. 

ಅನೂಷಾ 

Advertisement

Udayavani is now on Telegram. Click here to join our channel and stay updated with the latest news.

Next