Advertisement

ಆನೆಗುಡ್ಡೆ ಶ್ರೀವಿನಾಯಕ ದೇಗುಲ‌: ಹರಿದು ಬಂದ ಭಕ್ತ ಸಮೂಹ

12:55 PM Jul 06, 2021 | Team Udayavani |

 ತೆಕ್ಕಟ್ಟೆ: ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಜು.6 ಮಂಗಳವಾರದಂದು ಮುಂಜಾನೆಯಿಂದಲೇ ಭಕ್ತ ಸಮೂಹ ಹರಿದು ಬಂದಿದ್ದು, ದೇವರ ದರ್ಶನ ಪಡೆದು ಪುನೀತರಾದರು.

Advertisement

ಕೋವಿಡ್ ೧೯ರ ನಿಯಂತ್ರಣ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಭಕ್ತಾಧಿಗಳಿಗೆ ಜು.5 ರ ಬೆಳಗ್ಗೆ ಗಂಟೆ 6 ರಿಂದ 12:30 ರ ವರೆಗೆ ಹಾಗೂ ಮಧ್ಯಾಹ್ನ ಗಂಟೆ ೩.೩೦ ರಿಂದ ಸಂಜೆ ಗಂಟೆ 7.30 ರ ವರೆಗೆ ದೇವಳ ಪ್ರವೇಶ, ದೇವರ ದರ್ಶನಕ್ಕೆ ಮಾತ್ರ ಸೀಮಿತ ಗೊಳಿಸಿದೆ. ಯಾವುದೇ ಸೇವೆ ಸಂಕಲ್ಪಗಳು ಹಣ್ಣುಕಾಯಿ ಸೇವೆ ಹಾಗೂ  ಪ್ರಸಾದ ಇರಲಿಲ್ಲ.

ಈ ಸಂದರ್ಭದಲ್ಲಿ ದೇವಳದ ಹಿರಿಯ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಆಡಳಿತ ಧರ್ಮದರ್ಶಿ ಕೆ. ಶ್ರೀ ರಮಣ ಉಪಾಧ್ಯಾಯ , ಪರ್ಯಾಯ ಅರ್ಚಕ ವೆಂಕಟನಾರಾಯಣ ಉಪಾಧ್ಯಾಯ ಹಾಗೂ ಸಹೋದರರು ಮತ್ತು ಶ್ರೀ ದೇವಳದ ನೌಕರರು ಉಪಸ್ಥಿತರಿದ್ದರು.

ವರದಿ : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ

Advertisement
Advertisement

Udayavani is now on Telegram. Click here to join our channel and stay updated with the latest news.

Next