Advertisement

ಹುತ್ತದಲ್ಲಿ ದೇವಿ ಮೂರ್ತಿ ಉದ್ಭವ

03:00 PM Dec 22, 2018 | |

ರಾಯಚೂರು: ನಗರದ ಜ್ಯೋತಿ ಕಾಲನಿಯಲ್ಲಿ ಮಾರಮ್ಮ ದೇವಿ ದೇವಸ್ಥಾನ ಹತ್ತಿರದ ಹುತ್ತದಲ್ಲಿ ಯಲ್ಲಮ್ಮ ದೇವಿ ಮೂರ್ತಿ ಉದ್ಭವವಾಗಿದೆ ಎಂಬ ಸುದ್ದಿ ಶುಕ್ರವಾರ ಎಲ್ಲೆಡೆ ಹರಿದಾಡಿದೆ. ಬೆಳಗಿನ ಜಾವ 5:00ರ ಸುಮಾರಿಗೆ ಸವದತ್ತಿ ಯಲ್ಲಮ್ಮನ ಸ್ವರೂಪದ ಕಲ್ಲಿನ ಮೂರ್ತಿ ಉದ್ಭವಿಸಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಭಕ್ತರು ಕುಂಕುಮ ಭಂಡಾರ ಎರಚಿ ಭಕ್ತಿ ಸಮರ್ಪಿಸಿದರು. ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಈ ಸುದ್ದಿ ಕಾಡ್ಗಿಚ್ಚಿನಿಂದ ಎಲ್ಲೆಡೆ ಹರಡಿ ನಗರವಾಸಿಗಳು ದರ್ಶನಕ್ಕಾಗಿ ಸಾಲುಗಟ್ಟಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next