Advertisement
ರವಿವಾರ ಧಾರವಾಡಕ್ಕೆ ಬಂದಿದ್ದ ದೇವೇಗೌಡರು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಅವರ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡಿದರು. ಗೌಡ್ರು ಬರುತ್ತಾರೆಎಂದಾಕ್ಷಣ ಕೊನರಡ್ಡಿ ಅವರು ರಾಗಿ ಮುದ್ದೆ ಸಜ್ಜುಗೊಳಿಸಿದ್ದರು. ಆದರೆ ದೇವೇಗೌಡರು ಮಾತ್ರ ರಾಗಿ ಮುದ್ದೇನ ಸೈಲೆಂಟಾಗಿ ಸೈಡ್ಗೆ ಸರಿಸಿ ಬಿಸಿ ಬಿಸಿ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಶೇಂಗಾ ಚಟ್ನಿ, ಕೆನೆ ಮೊಸರು ಸವಿದರು. ಇದಲ್ಲದೇ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಅವರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಒಂದು ತಿಂಗಳೊಳಗೆ ದೊಡ್ಡ ಸ್ಥಾನ ನೀಡಲಾಗುವುದು. ಯಾವ ಹುದ್ದೆ ನೀಡಬೇಕು ಎಂಬುದು ತೀರ್ಮಾನವಾಗಿದೆ ಎಂದರು.