Advertisement

ಶೃಂಗೇರಿಗೆ ದೇವೇಗೌಡ ದಂಪತಿ ಭೇಟಿ, ಪೂಜೆ

01:25 AM May 17, 2019 | Team Udayavani |

ಶೃಂಗೇರಿ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ದಂಪತಿ ಗುರುವಾರ ಇಲ್ಲಿನ ಶಾರದಾಪೀಠಕ್ಕೆ ಭೇಟಿ ನೀಡಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು.

Advertisement

ಬುಧವಾರ ಉಡುಪಿಯಿಂದ ಆಗಮಿಸಿದ ಎಚ್.ಡಿ. ದೇವೇಗೌಡ ಹಾಗೂ ಚೆನ್ನಮ್ಮ ಅವರು ಶ್ರೀಶಾರದಾ ಪೀಠದಲ್ಲಿ ಶ್ರೀಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಇಲ್ಲಿಯೇ ವಾಸ್ತವ್ಯ ಹೂಡಿದ್ದರು.

ಗುರುವಾರ ಬೆಳಗ್ಗೆ ಶ್ರೀಶಾರದಾಪೀಠದ ನರಸಿಂಹವನದ ಗುರುಭವನದಲ್ಲಿ ಉಭಯ ಜಗದ್ಗುರುಗಳಾದ ಶ್ರೀಭಾರತೀತೀರ್ಥ ಮಹಾಸ್ವಾಮೀಜಿ, ಶ್ರೀವಿಧುಶೇಖರ ಭಾರತೀ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ನಂತರ ಪೀಠದ ಹೊರ ಪ್ರಾಂಗಣದ ಶ್ರೀತೋರಣ ಗಣಪತಿ, ಶ್ರೀಶಂಕರಾಚಾರ್ಯ, ಶ್ರೀವಿದ್ಯಾಶಂಕರ ದೇಗುಲಗಳಿಗೆ ತೆರಳಿ ದೇವರ ದರ್ಶನ ಪಡೆದರು. ಬಳಿಕ ಶ್ರೀಶಾರದಾ ಸನ್ನಿಧಿಗೆ ತೆರಳಿ ಶ್ರೀಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಮಧ್ಯಾಹ್ನದ ನಂತರ ಹಾಸನಕ್ಕೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next