Advertisement

ಸಂಘಟನೆಗೆ ಒತ್ತು ನೀಡಿದಾಗ ಅಭಿವೃದ್ಧಿ

12:47 PM Feb 01, 2022 | Team Udayavani |

ಕಲಬುರಗಿ: ಸೇವಾ ಕಾರ್ಯದಲ್ಲಿ ಕೆಲಸ ಮಾಡಬೇಕೆಂಬ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟನೆಗೆ ಒತ್ತು ನೀಡುವುದು ಅಗತ್ಯವಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಚೀಫ್‌ ಎಂಜಿನಿಯರ್‌ ಜಗನ್ನಾಥ ಹಲಿಂಗೆ ಹೇಳಿದರು.

Advertisement

ನಗರದ ಐವಾನ್‌ ಇ ಶಾಹಿ ಅತಿಥಿಗೃಹದಲ್ಲಿ ಕರ್ನಾಟಕ ಎಂಜಿನಿಯರಿಂಗ್‌ ಸೇವಾ ಸಂಘದ ಜಿಲ್ಲಾ ಘಟಕದ ಎಂಜಿನಿಯರ್ ದಿನಚರಿ 2022 (ಡೈರಿ) ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಎಂಜಿನಿಯರ್ ಸೇವಾ ಸಂಘ ಉತ್ತಮವಾಗಿ ಕೆಲಸ ಮಾಡುತ್ತಿದೆ. ನೂತನ ಡೈರಿಯು ಎಂಜಿನಿಯರುಗಳಿಗೆ ದಿನ ನಿತ್ಯದ ಭೇಟಿ ಹಾಗೂ ಇತರೆ ವಿಷಯ ದಾಖಲು ಮಾಡಲು ಅನುಕೂಲವಾಗುತ್ತದೆ ಎಂದರು.

ಚಿಫ್‌ ಎಂಜಿನಿಯರ್‌ ಆರ್‌ .ಎಲ್‌. ವೆಂಕಟೇಶ ನೆರವೇರಿಸಿದರು. ಸೇವಾ ಸಂಘದ ನೂತನ ಅಧ್ಯಕ್ಷ ಕಾಳಪ್ಪ ಚೇಂಗಟಿ, ಹಿಂದಿನ ಅಧ್ಯಕ್ಷ ನೀಲಕಂಠ ಜಮಾದಾರ, ಅಪ್ಪಾರಾವ ಕುಲಕರ್ಣಿ, ಮಲ್ಲಿಕಾರ್ಜುನ ಮುದ್ದಾ, ಮಾರ್ತಂಡ ಶಾಸ್ತ್ರಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next