Advertisement

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಈಗ ಅಮೃತ ಕಾಲ: ಸಿಎಂ ಬೊಮ್ಮಾಯಿ

09:08 PM Feb 26, 2023 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಸರ್ವಾಂಗೀಣ ಅಭಿವೃದ್ಧಿಗೆ ಈಗ ಅಮೃತ ಕಾಲ ಕೂಡಿ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದ ಗುಲ್ಬರ್ಗ ವಿವಿಯಲ್ಲಿ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಉತ್ಸವ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು. ದೇಶಕ್ಕೆ ಕಳೆದ ವರ್ಷ ಅಮೃತ ಕಾಲ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ ನಮ್ಮ ಕಲ್ಯಾಣ ಕರ್ನಾಟಕ ಕ್ಕೆ ಈಗ ಅಮೃತ ಕಾಲ ಎದುರಾಗಿದೆ ಎಂದರು.

ಕಲಬುರಗಿಯಲ್ಲಿ ಟೆಕ್ಸಟೈಲ್ ಪಾರ್ಕ್, ಯಾದಗಿರಿಯಲ್ಲಿ ಫಾರ್ಮ ಪಾರ್ಮ್ , ಬೀದರ್ ದಲ್ಲಿ ಪೆಟ್ರೋ ಕೆಮಿಕಲ್ ಇಂಡಸ್ಟ್ರೀಸ್, ರಾಯಚೂರು- ಕೊಪ್ಪಳದಲ್ಲಿ ವಿಮಾನ ನಿಲ್ದಾಣ, ಬಳ್ಳಾರಿ ಯಲ್ಲಿ ಜೀನ್ಸ್ ಉದ್ಯಮವು ಕಕ ಭಾಗದ ಚಿತ್ರಣವೇ ಬದಲು ಮಾಡುವ ಅಮೃತ ಕಾಲ ಎದುರಾಗಿದೆ ಎಂದು ಸಿಎಂ ಹೇಳಿದರು.

ಕಲ್ಯಾಣ ಕರ್ನಾಟಕ ಭಾಗ ಹಿಂದುಳಿಯಲು 35-40 ವರ್ಷಗಳ ಕಾಲ ಈ ಭಾಗವನ್ನು ಪ್ರತಿನಿಧಿಸಿದ್ದ ಜನಪ್ರತಿನಿಧಿಗಳು ಇಚ್ಛಾಶಕ್ತಿ ಕೊರತೆಯಿಂದ ಈ ಭಾಗ ಹಿಂದುಳಿದಿದೆ. 371 ಜೆ ಜಾರಿಗೆ ಬಂದಿದ್ದರೂ ಅಭಿವೃದ್ದಿಗೆ ಬಹಳ ವೇಗ ದೊರೆತ್ತಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆಗಳನ್ನು ನಡೆಸಿ ಈ ಭಾಗದ ಶಿಕ್ಷಣ, ನೀರಾವರಿ, ರಸ್ತೆಗಳ ಅಭಿವೃದ್ಧಿ ಗೆ ಚಾಲನೆ ನೀಡಿದ ಪರಿಣಾಮ ಅಭಿವೃದ್ಧಿ ಗೆ ನಾಂದಿ ಹಾಡಲಾಯಿತು ಎಂದರು.

ತದನಂತರ ಬಿಎಸ್ ವೈ ಅವರೇ ಹೈದ್ರಾಬಾದ್ ಕರ್ನಾಟಕ ಹೆಸರನ್ನು ಕಲ್ಯಾಣ ಕರ್ನಾಟಕ ನಾಮಾಂಕಿತಗೊಳಿಸಿ ಕೆಕೆಆರ್ ಡಿಬಿ‌ ಅನುದಾನ 1500 ಕೋ.ರೂ ಹೆಚ್ಚಿಸಿದರು. ಅದೇ ರೀತಿ ತಾವು 3000 ಕೋ.ರೂ ಹೆಚ್ಚಿಸಿ ಈಗ 5000 ಕೋ.ರೂ.ಗೆ ಹೆಚ್ಚಿಸಲಾಗಿದೆ. ಇದು ಅಭಿವೃದ್ಧಿ ಎಂದು ಸಿಎಂ ಹೇಳಿದರು.

Advertisement

ಕೆಕೆಆರ್ ಡಿಬಿಯಿಂದ ಈಗಂತು ಅಭಿವೃದ್ಧಿ ನಿರೀಕ್ಷೆ ಮೀರಿ ನಡೆಯುತ್ತಿದೆ. ಈ ವರ್ಷ ಕಕ ಭಾಗದಲ್ಲಿ 1100 ಶಾಲೆಗಳ ಕಟ್ಟಡ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ವರ್ಷವೂ ಸಾವಿರ ಶಾಲೆಗಳ ಕೋಣೆ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಈ ಭಾಗ ಸಂಪದ್ಭರಿತ ವಾಗಿದೆ. ಯುವಕರಲ್ಲಿ ಬದಲಾವಣೆ ಮಾಡಿ ತೋರಿಸುವ ಶಕ್ತಿ ಇದೆ. ರೈತರಿಗೆ ಬಂಗಾರದ ಬೆಳೆಯುವ ಶಕ್ತಿ ವಿದೆ.‌ ಕಾರ್ಮಿಕರಲ್ಲಿ ಶರಣರ ಕಾಯಕ ಶೃದ್ದೆಯಿದೆ ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಕ ಭಾಗದ ಬಗ್ಗೆ ವಿಶೇಷ ಮೂರು ತಿಂಗಳಿನಿಂದ ಸತತ ಹಗಲಿರಳು ರಾಜ್ಯದಾದ್ಯಂತ ಸುತ್ತು ಹಾಕುತ್ತಿದ್ದಾರೆ.

ಹಿಂದುಳಿದ ಹಣೆಪಟ್ಟಿ ಹೋಗಲಾಡಿಸಲು ಎಲ್ಲರೂ ಕೈ ಜೋಡಿಸಬೇಕು. ಮುಂದಿನ ವರ್ಷವೂ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಮಾಡೋಣ ಎಂದು ಹೇಳಿದರು.

ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಆಶಯ ನುಡಿಗಳನ್ನಾಡಿ, ಕಲಬುರಗಿಯಲ್ಲಿ ಮತ್ತೆ ಕಲ್ಯಾಣ ಕರ್ನಾಟಕ ಉತ್ಸವ ಆಗಬೇಕೆಂದರೆ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಸಿಎಂ ಆದರೆ ಮಾತ್ರ ಸಾಧ್ಯ. ಹೀಗಾಗಿ ಸೇರಿದ ಜನರೆಲ್ಲರೂ ಜೈ ಘೋಷಣೆ ಮಾಡುವ ಮೂಲಕ ಬೆಂಬಲಿಸೋಣ ಎಂದರು.

ಇದೇ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಕಲ್ಯಾಣ ಕರ್ನಾಟಕ ಇತಿಹಾಸ ಕುರಿತು ಹೊರ ತಂದ ಕೃತಿಯನ್ನು ಬಿಡುಗಡೆಗೊಳಿಸಿದರು.

ಶಾಸಕರಾದ ಎಂ.ವೈ ಪಾಟೀಲ್, ಬಸವರಾಜ ಮತ್ತಿಮಡು, ಶಶೀಲ್ ಜಿ. ನಮೋಶಿ, ಬಾಬುರಾವ ಚಿಂಚನಸೂರ, ಮಾಜಿ ಸಚಿವ ಮಾಲೀಕಯ್ಯ ಗುತ್ಯೇದಾರ, ಕುಡಾ ಅಧ್ಯಕ್ಷ ಅವಿನಾಶ ಕುಲಕರ್ಣಿ, ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವಿದ್ಯಾ ಸಾಗರ ಶಾಬಾದಿ, ಮುಖಂಡರಾದ ಶಿವಕಾಂತ ಮಹಾಜನ್, ಡಾ. ವಿಕ್ರಮ ಪಾಟೀಲ್, ಜಿಲ್ಲಾಧಿಕಾರಿ ಯಶವಂತ ಗುರುಕರ್ ಸೇರಿದಂತೆ ಮುಂತಾದವರಿದ್ದರು. ಕೆಕೆಆರ್ ಡಿಬಿ ಕಾರ್ಯದರ್ಶಿ ಅನಿರುದ್ದ ಶ್ರವಣ ಸ್ವಾಗತಿಸಿದರು. ಶ್ರೀ ಕಾಂತ ಪುಲಾರೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next