Advertisement

ವಿದ್ಯಾರ್ಥಿಗಳಿಂದ ಕೃಷಿ ಯಂತ್ರೋಪಕರಣ ಅಭಿವೃದ್ಧಿ

03:48 PM Sep 23, 2018 | Team Udayavani |

ಧಾರವಾಡ: ಜಿಲ್ಲೆಯ ವಿವಿಧ ಪ್ರೌಢಶಾಲೆಗಳ ಕೃಷಿ ಆಸಕ್ತ ವಿದ್ಯಾರ್ಥಿಗಳು ರೈತರಿಗೆ ಕಡಿಮೆ ಬಂಡವಾಳದಲ್ಲಿ ಹೆಚ್ಚು ಅನುಕೂಲ ನೀಡುವ ಕೃಷಿ ಉಪಕರಣಗಳನ್ನು ಸಿದ್ಧಗೊಳಿಸಿದ್ದು, ಇವುಗಳ ಪ್ರಾತ್ಯಕ್ಷಿಕೆ ಗಮನ ಸೆಳೆಯುತ್ತಿದೆ.

Advertisement

ಅಗಸ್ತ್ಯಾ ಫೌಂಡೇಶನ್‌ ಹಾಗೂ ದೇಶಪಾಂಡೆ ಫೌಂಡೇಶನ್‌ ವತಿಯಿಂದ ಬೀಜ ಊರುವ ಯಂತ್ರವನ್ನು ಅಣ್ಣಿಗೇರಿಯ ನಿಂಗಮ್ಮ ಹೂಗಾರ ಹೈಸ್ಕೂಲಿನ ವಿದ್ಯಾರ್ಥಿ ಚೇತನ ಯಳವತ್ತಿ ಮತ್ತು ಚೇತನ ಮುಂಡರಗಿ ಎಂಬ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ. ಕಳೆ ನಿಯಂತ್ರಣ ಮತ್ತು ಮನೆಗಳಲ್ಲಿನ ಕಲ್ಲು ಒರೆಸುವ ಸೋಲಾರ ಆಧಾರಿತ ಯಂತ್ರವೊಂದನ್ನು ಕಿರೇಸೂರು ಗ್ರಾಮದ ಯಂಕಮ್ಮ ಮತ್ತು ಸುಷ್ಮಾ ಅಭಿವೃದ್ಧಿ ಪಡಿಸಿದ್ದಾರೆ.

ಸೈಕಲ್‌ ಮೂಲಕ ಗೊಬ್ಬರ ಹಾಕುವ ಉಪಕರಣವೊಂದನ್ನು ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಶಿವಾನಂದ ಮಾಧ್ಯಮಿಕ ಶಾಲೆ ವಿದ್ಯಾರ್ಥಿಗಳಾದ ರಾಜು ಹೊನ್ನಪ್ಪಗೌಡ, ಸಿದ್ದಾರೂಢ ದೇಸಾಯಿ, ಪ್ರಶಾಂತ ಮಾಯಣ್ಣವರ
ಅಭಿವೃದ್ಧಿ ಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next