Advertisement

“ಓದುವ ಹವ್ಯಾಸ ಬೆಳೆಸಿಕೊಳ್ಳಿ’

09:14 PM Jul 17, 2019 | mahesh |

ಬಂಟ್ವಾಳ: ಗ್ರಂಥಾಲಯ ನೆಮ್ಮದಿ ನೀಡುವ, ಮನಸ್ಸು ಕೇಂದ್ರೀಕೃತಗೊಳ್ಳುವ ದೇವಾಲಯ ಇದ್ದಂತೆ. ಓದುವ ಹವ್ಯಾಸವನ್ನು ಮಕ್ಕಳು ಸ್ವತಃ ಬೆಳೆಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಸಿ.ಡಿ.ಪಿ.ಒ. ಗಾಯತ್ರಿ ಕಂಬಳಿ ಹೇಳಿದರು.

Advertisement

ಬಿ.ಸಿ.ರೋಡ್‌ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಓದುವ ತಿಂಗಳು ಕಾರ್ಯಕ್ರಮದಲ್ಲಿ ಅವರು ಮಾತ ನಾಡಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾ ಲಯ ಮಂಗಳೂರು ಹಾಗೂ ಬಂಟ್ವಾಳ ಶಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಉದ್ದೇಶ ಈಡೇರಲಿ ಎಂದರು.

ಜಯಂತಿ ಗಂಗಾಧರ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಓದುವ ಮನಸ್ಸು ಮಾಡಿದಾಗ ವ್ಯಕ್ತಿತ್ವ ವಿಕಸನ ಗೊಳ್ಳುತ್ತದೆ. ಕತೆ-ಕವನಗಳು ಮನಸ್ಸು ಶುದ್ಧಿ ಮಾಡುತ್ತವೆ ಎಂದರು.

ಮಕ್ಕಳಿಗೆ ಕರಕುಶಲ ವಸ್ತುಗಳ ತಯಾರಿಕೆ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು. ಜಿಲ್ಲಾ ಕೇಂದ್ರ ಗ್ರಂಥಾ ಲಯದ ಗ್ರಂಥಾಧಿಕಾರಿ ಮಮತಾ ರೈ, ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥ ಪಾಲಕಿ ಗಾಯತ್ರಿ, ಓದುಗರಾದ ಜೆರೊಮ್‌ ರೋಡ್ರಿಗಸ್‌, ಗ್ರಂಥಾಲಯ ಸಿಬಂದಿ ಸುಜಾತಾ ಹಾಗೂ ಯಶವಂತಿ ಉಪಸ್ಥಿತರಿದ್ದರು. ಶಾಖಾ ಗ್ರಂಥ ಪಾಲಕಿ ಪ್ರಣಿತಪ್ರಿಯಾ ಮೊಂತೆರೊ ಸ್ವಾಗತಿಸಿ, ನಿರೂಪಿಸಿದರು. ಶಾಖಾ ಗ್ರಂಥ ಪಾಲಕಿ ನಮಿತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next