Advertisement

H. D. Deve Gowda, ಕುಮಾರಸ್ವಾಮಿ ಬಿಜೆಪಿ ವಕ್ತಾರರು: ಸಿಎಂ ಸಿದ್ದರಾಮಯ್ಯ

11:41 PM Mar 13, 2024 | Team Udayavani |

ಚಿಕ್ಕಬಳ್ಳಾಪುರ/ಚಿಂತಾಮಣಿ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಸ್ವಾರ್ಥಕೋಸ್ಕರ ಬಿಜೆಪಿ ಜತೆ ಶಾಮೀಲಾಗಿ ರಾಜ್ಯದ ಅಭಿವೃದ್ಧಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.

Advertisement

ಚಿಂತಾಮಣಿಯಲ್ಲಿ ಮಾತ ನಾಡಿದ ಅವರು, ದೇವೇ ಗೌಡರು, ಕುಮಾರಸ್ವಾಮಿ ರಾಜ್ಯದಲ್ಲಿ ಬಿಜೆಪಿ ವಕ್ತಾರರಾಗಿ ಕೆಲಸ ಮಾಡುತ್ತಿ ದ್ದಾರೆಂದು ವ್ಯಂಗ್ಯವಾಡಿದರು.

ಬಿಜೆಪಿಯವರು ಹೇಳುವ ಸುಳ್ಳಿನಲ್ಲಿ ಇವರೂ ಸೇರಿಕೊಂಡಿದ್ದಾರೆ. ಬಿಜೆಪಿ ಆಡಳಿತವನ್ನು ದೇವೇಗೌಡರು ಹೊಗಳಲು ಆರಂಭಿಸಿದ್ದಾರೆ. ಮುಂದಿನ ಜನ್ಮದಲ್ಲಿ ಹುಟ್ಟುವುದಾದರೆ ಮುಸ್ಲಿಮನಾಗಿ ಹುಟ್ಟುವುದಾಗಿ ಇದೇ ದೇವೇಗೌಡರು ಹೇಳಿದ್ದರು. ಬಿಜೆಪಿಯವರು ಜಾತಿವಾದಿ, ಕೋಮುವಾದಿಗಳು ಎಂದೂ ಹೇಳಿದ್ದರು. ಈಗ ನರೇಂದ್ರ ಮೋದಿ-ನಮ್ಮದು ಹಳೆ ಸಂಬಂಧ ಎಂದು ಹೇಳುತ್ತಿದ್ದಾರೆ ಎನ್ನುತ್ತಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next