Advertisement

ನನ್ನನ್ನು ಜೆಡಿಎಸ್‌ನಿಂದ ದೇವೇಗೌಡರು ಉಚ್ಛಾಟಿಸಿದ್ರು, ಗೊತ್ತಾಯ್ತಾ

09:16 AM May 12, 2019 | Team Udayavani |

ಕಲಬುರಗಿ:ಪಕ್ಷಾಂತರ ವಿಚಾರವಾಗಿ ಕಾಂಗ್ರೆಸ್‌, ಬಿಜೆಪಿ ನಾಯಕರ ನಡುವೆ ವಾಗ್ಸಮರ ಮುಂದುವರಿದಿದ್ದು, ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಹೋಗಿರಲಿಲ್ವೆ ಎಂದು ಪ್ರಶ್ನಿಸಿದ್ದ ಆರ್‌.ಅಶೋಕ್‌ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ತಿರುಗೇಟು ನೀಡಿದ್ದಾರೆ.

Advertisement

ಚಿಂಚೋಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನನ್ನ ಅಹಿಂದ ಚುಟುವಟಿಕೆ ನಡೆಸಿದ್ದಕ್ಕೆ ದೇವೇಗೌಡರು ಜೆಡಿಎಸ್‌ನಿಂದ ಉಚ್ಛಾಟನೆ ಮಾಡಿದ್ದರು. ನಾನು ಪಕ್ಷ ಬಿಟ್ಟಿರಲಿಲ್ಲ. ನನಗೂ ಉಮೇಶ್‌ ಜಾಧವ್‌ಗೆ ಇರುವ ವ್ಯತ್ಯಾಸ ಇಷ್ಟೆ ಎಂದರು.

ಅಶೋಕ್‌ಗೆ ಸುಳ್ಳು ಗೊತ್ತಿಲ್ಲ, ಸತ್ಯವೂ ಗೊತ್ತಿಲ್ಲ, ಏನೂ ಗೊತ್ತಿಲ್ಲ ಎಂದರು.

ಚಿಂಚೋಳಿಯಲ್ಲಿ ಉಮೇಶ್‌ ಜಾಧವ್‌ ಅವರಿಗೆ ಸಿದ್ದರಾಮಯ್ಯ ಗೋಮುಖ ವ್ಯಾಘ್ರ ಎಂದು ಕರೆದಿದ್ದರು. ಪಕ್ಷಕ್ಕೆ ದ್ರೋಹ ಬಗೆದ ವ್ಯಕ್ತಿ ಎಂದು ಏಕವಚನದಲ್ಲೇ ತೀವ್ರ ವಾಗ್ಧಾಳಿ ನಡೆಸಿದ್ದರು.

ಆರ್‌.ಅಶೋಕ್‌ ಅವರು ಸಿದ್ದಾರಮಯ್ಯ ಅವರಿಗೆ ಜೆಡಿಎಸ್‌ ಮೇಲೆ 40 ವರ್ಷದ ದ್ವೇಷ. ಅವರನ್ನು ಮೈಸೂರು ರೋಡ್‌ಗೆ ತಳ್ಳಲಾಗಿತ್ತು, ಅದನ್ನು ಅವರು ತೀರಿಸಿಕೊಳ್ಳಲಿದ್ದಾರೆ ಎಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next