Advertisement

ದೇವೇಗೌಡರಿಗೆ ನಾಯಕರನ್ನು ತುಳಿದು ಗೊತ್ತಿಲ್ಲ: ಪ್ರತಾಪ್‌

11:19 PM Apr 03, 2024 | Team Udayavani |

ಮೈಸೂರು: ಅನ್ನ ತಿನ್ನುವ ಬಾಯಿಯಲ್ಲಿ ಏನೇನೋ ಮಾತನಾಡಬೇಡಿ. ಎಚ್‌. ಡಿ. ದೇವೇಗೌಡರಿಗೆ ನಾಯಕರನ್ನು ಬೆಳೆಸಿ ಗೊತ್ತೇ ಹೊರತು, ತುಳಿದು ಗೊತ್ತಿಲ್ಲ ಎಂದು ಸಚಿವ ಕೆ. ವೆಂಕಟೇಶ್‌ ವಿರುದ್ಧ ಸಂಸದ ಪ್ರತಾಪ್‌ ಸಿಂಹ ವಾಗ್ಧಾಳಿ ನಡೆಸಿದರು.

Advertisement

ಪ್ರತಾಪ್‌ ಸಿಂಹಗೆ ಟಿಕೆಟ್‌ ಕೈತಪ್ಪಲು ದೇವೇ ಗೌಡರೇ ಕಾರಣ ಎಂಬ ಸಚಿವ ಕೆ. ವೆಂಕಟೇಶ್‌ ಹೇಳಿಕೆಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ವೆಂಕಟೇಶ್‌ ಅವರ ಹೇಳಿಕೆ ನೋಡಿ ಅವರ ಮೇಲಿದ್ದ ಎಲ್ಲ ಗೌರವ ಮರೆಯಾಗಿದೆ. ನಿಮಗೆ ರಾಜಕೀಯವಾಗಿ ಬೆಳೆಸಿ, ಶಕ್ತಿ ತುಂಬಿದ್ದು ದೇವೇಗೌಡರು ಎಂಬುದನ್ನು ಮರೆಯಬೇಡಿ. ನನಗೆ ಟಿಕೆಟ್‌ ಕೊಡಿಸಬೇಕೆಂದು ಒಂದು ಗಂಟೆ ಕಾಲ ಕಾದು ಅಮಿತ್‌ ಶಾ ಅವರ ಜತೆ ಪೋನ್‌ನಲ್ಲಿ ಮಾತನಾಡಿದ್ದರು.

ನನಗೆ ಟಿಕೆಟ್‌ ಕೊಡಿ ಎಂದು ಅಮಿತ್‌ ಶಾ ಅವರನ್ನು ಕೇಳಿದವರಲ್ಲಿ ದೇವೇಗೌಡರೇ ಪ್ರಮುಖರು. ಇಂತಹ ವ್ಯಕ್ತಿ ನನಗೆ ಟಿಕೆಟ್‌ ತಪ್ಪಿಸುತ್ತಾರೆ ಅಂತ ಹೇಳಿದರೆ ಹೇಗೆ? ವೆಂಕಟೇಶ್‌ ಅವರು ಇಂತಹ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next