Advertisement

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಮಿಂಚಿದ ಪಡಿಕ್ಕಲ್, ಕರ್ನಾಟಕಕ್ಕೆ ಮತ್ತೊಂದು ಜಯ

04:58 PM Nov 08, 2021 | Team Udayavani |

ಗುವಾಹಟಿ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡ ತನ್ನ ವಿಜಯಯಾತ್ರೆಯನ್ನು ಮುಂದುವರಿಸಿದೆ. ಬರೋಡಾ ವಿರುದ್ಧ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿದ ಮನೀಷ್ ಪಾಂಡೆ ತಂಡ ಗುಂಪು ಹಂತದಲ್ಲಿ ಇದುವರೆಗೆ ಆಡಿರುವ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ.

Advertisement

ಬರ್ಸಾಪುರ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬರೋಡಾ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ134 ರನ್ ಗಳಿಸಿತು. ಭನು ಪಾನಿಯಾ 36 ರನ್, ಪಾರ್ಥ್ ಕೊಹ್ಲಿ 24 ರನ್ ಗಳಿಸಿದರು. ಕರ್ನಾಟಕದ ಪರ ಕೆ.ಗೌತಮ್ ಮತ್ತು ವಿಜಯ್ ಕುಮಾರ್ ತಲಾ ಎರಡು ವಿಕೆಟ್ ಪಡೆದರು.

ಇದನ್ನೂ ಓದಿ:ಭಾರತ ತಂಡದಲ್ಲಿ ವೇಗದ ಬೌಲಿಂಗ್ ಮಾಡುವ ಬ್ಯಾಟ್ಸಮನ್ ಗಳ ಅಗತ್ಯವಿದೆ: ಲಕ್ಷ್ಮಣ್

ಗುರಿ ಬೆನ್ನತ್ತಿದ ಕರ್ನಾಟಕ ತಂಡಕ್ಕೆ ಮಯಾಂಕ್ ಅಗರ್ವಾಲ್ ಮತ್ತು ದೇವದತ್ತ ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದರು. ಮಯಾಂಕ್ 28 ರನ್ ಗಳಿಸಿದರೆ, ಪಡಿಕ್ಕಲ್ 56 ರನ್ ಕಲೆಹಾಕಿದರು. ಕರುಣ್ ನಾಯರ್ 36 ರನ್ ಗಳಿಸಿದರು. ಕರ್ನಾಟಕ ತಂಡ 19.1 ಓವರ್ ನಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಜಯ ಸಾಧಿಸಿತು.

ಗುಂಪು ಹಂತದ ಕೊನೆಯ ಪಂದ್ಯವನ್ನು ಕರ್ನಾಟಕ ತಂಡ ಮಂಗಳವಾರ ಬಂಗಾಳದ ವಿರುದ್ಧ ಆಡಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next