Advertisement

ತಂಬುತ್ತಡ್ಕ -ನುಳಿಯಾಲು ರಸ್ತೆಯಲ್ಲಿ ಕುಸಿಯುತ್ತಿದೆ ಮೋರಿ

01:01 PM Sep 27, 2018 | |

ನಿಡ್ಪಳ್ಳಿ : ಇಲ್ಲಿಯ ವಿಜಯನಗರ ತಂಬುತ್ತಡ್ಕ ನುಳಿಯಾಲು ತೆರಳುವ ಜಿಲ್ಲಾ ಪಂಚಾಯತ್‌ ರಸ್ತೆಯ ದೇವಸ್ಯ ಎಂಬಲ್ಲಿ ತಿರುವಿನಲ್ಲಿರುವ ಮೋರಿಯೊಂದು ಕುಸಿಯುವ ಭೀತಿಯಲ್ಲಿದ್ದು ತತ್‌ಕ್ಷಣ ದುರಸ್ತಿಗೊಳಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

Advertisement

ಈ ರಸ್ತೆಯಲ್ಲಿ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ಸಹಿತ ಅನೇಕ ಖಾಸಗಿ ವಾಹನಗಳು ಸಂಚರಿಸುತ್ತಿವೆ. ಅಲ್ಲದೆ ಶಾಲಾ ಮಕ್ಕಳ ವಾಹನಗಳು, ರಿಕ್ಷಾ ಮೊದಲಾದ ವಾಹನಗಳು ಸಂಚರಿಸುತ್ತಿದ್ದು ಮೋರಿ ಅಪಾಯದ ಸ್ಥಿತಿಯಲ್ಲಿದೆ. ಇದರ ಬಗ್ಗೆ ಗ್ರಾಮ ಪಂಚಾಯತ್‌ ಸಭೆಯಲ್ಲಿ ಗಮನಕ್ಕೆ ತರಲಾಗಿದೆ. ತಾಲೂಕು ಪಂಚಾಯತ್‌ ಜಿಲ್ಲಾ  ಪಂಚಾಯತ್‌ ಗಮನಕ್ಕೂ ತರಲಾಗಿದೆ. ಆದರೂ ಈ ಬಗ್ಗೆ ಈವರೆಗೂ ಯಾವುದೇ ರೀತಿಯ ಸ್ಪಂದನೆ ಸಿಗದಿರುವುದು ಈ ಭಾಗದ ಜನರಿಗೆ ಬೇಸರ ತಂದಿದೆ. ಇನ್ನಷ್ಟು ಅಪಾಯ ಎದುರಾಗುವ ಮೊದಲು ಇದನ್ನು ಸಂಬಂಧಪಟ್ಟವರು ಗಮನಿಸಿ, ದುರಸ್ತಿಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

 ದುರಸ್ತಿಗೆ ಕ್ರಮ
ಈಗಾಗಲೇ ಇದರ ಬಗ್ಗೆ ಗಮನ ನೀಡಲಾಗಿದೆ. ಅಪಾಯದ ಸ್ಥಿತಿಯಲ್ಲಿರುವುದರಿಂದ ತಾಲೂಕು ಪಂಚಾಯತ್‌ ವತಿಯಿಂದ ದುರಸ್ತಿಗೆ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು.
– ಹರೀಶ್‌ ಬಿಜತ್ರೆ
ಅಧ್ಯಕ್ಷರು, ಸ್ಥಾಯೀ ಸಮಿತಿ,
ಪುತ್ತೂರು ತಾ.ಪಂ

ಗಮನಕ್ಕೆ ತರಲಾಗಿದೆ
ಮೋರಿಯ ಅಪಾಯದ ಬಗ್ಗೆ ಈಗಾಗಲೇ ಗ್ರಾಮ ಪಂಚಾಯತ್‌ ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೆ ತಾ.ಪಂ. ಗಮನಕ್ಕೂ ತರಲಾಗಿದೆ. ಘನ ವಾಹನಗಳ ಸಂಚಾರ ಇರುವುದರಿಂದ ಸಂಬಂಧಿಸಿದ ಇಲಾಖೆ ತತ್‌ಕ್ಷಣ ದುರಸ್ತಿ ಗೊಳಿಸಬೇಕೆಂಬುದು ನಮ್ಮ ಬೇಡಿಕೆ.
 - ಮುರಳೀಕೃಷ್ಣ ಮುಂಡೂರು
   ನಿತ್ಯ ಪ್ರಯಾಣಿಕರು

Advertisement

Udayavani is now on Telegram. Click here to join our channel and stay updated with the latest news.

Next