Advertisement

Sandalwood: ʼದೇವರು ರುಜು ಹಾಕಿದನುʼ ಚಿತ್ರಕ್ಕೆ ಮುಹೂರ್ತ ಸಂಭ್ರಮ

05:55 PM Oct 21, 2024 | Team Udayavani |

ನಿರ್ದೇಶಕ ಸಿಂಪಲ್‌ ಸುನಿ “ದೇವರು ರುಜು ಮಾಡಿದನು’ ಚಿತ್ರದ ಮುಹೂರ್ತ ಭಾನುವಾರ ನಡೆಯಿತು. ಇಡೀ ಚಿತ್ರತಂಡ ಹಾಗೂ ಆಪ್ತರು ಜೊತೆಯಾಗಿ ಚಿತ್ರದ ಮುಹೂರ್ತ ನೆರವೇರಿಸಿದರು.

Advertisement

ಈ ಚಿತ್ರದ ಮೂಲಕ ನವನಟ ವೀರಾಜ್‌ ಹೀರೋ ಆಗುತ್ತಿದ್ದಾರೆ. ಈಗ ಈ ಚಿತ್ರಕ್ಕೆ ಇಬ್ಬರು ನವನಟಿಯರು ನಾಯಕಿಯರಾಗಿ ಎಂಟ್ರಿಕೊಡುತ್ತಿದ್ದಾರೆ. ಕೀರ್ತಿ ಕೃಷ್ಣ ಹಾಗೂ ದಿವಿತಾ ರೈ ಎಂಬ ನವ ನಾಯಕಿಯರನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ಸುನಿ. ಇದೇ ವೇಳೆ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಮ್ಯೂಸಿಕಲ್‌ ಜರ್ನಿಯ ಜೊತೆಗೆ ಆ್ಯಕ್ಷನ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಗ್ರೀನ್‌ ಹೌಸ್‌ ಮೂವೀಸ್‌ ಅಡಿಯಲ್ಲಿ ದೇವರು ರುಜು ಮಾಡಿದವನು ಸಿನಿಮಾವನ್ನು ಗೋವಿಂದ್‌ ರಾಜ್‌ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಜೆಜೆ, ಜೇಡ್‌ ಸ್ಯಾಂಡಿ ಹಾಗೂ ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದೆ

Advertisement

Udayavani is now on Telegram. Click here to join our channel and stay updated with the latest news.

Next