Advertisement

ಮನೆಯಲ್ಲೇ ಪ್ರಾರ್ಥನೆ ಮಾಡಿ: ಯಾಳಗಿ

01:28 PM Apr 25, 2020 | Naveen |

ದೇವದುರ್ಗ: ಶನಿವಾರದಿಂದ ರಂಜಾನ್‌ ಉಪವಾಸ ಆರಂಭವಾಗಲಿದೆ. ಮುಸ್ಲಿಂ ಬಾಂಧವರು ಪ್ರಾರ್ಥನೆ ಮನೆಯಲ್ಲಿ ಮಾಡಬೇಕು ಎಂದು ತಹಶೀಲ್ದಾರ್‌ ಮಧುರಾಜ ಯಾಳಗಿ ಹೇಳಿದರು.

Advertisement

ಪಟ್ಟಣದ ಮುರಿಗೆಪ್ಪ ಖೇಣೇದ್‌ ಫಂಕ್ಷನ್‌ ಸಭಾಂಗಣದಲ್ಲಿ ರಂಜಾನ್‌ ಹಬ್ಬದ ಪ್ರಯುಕ್ತ ತಾಲೂಕು ಆಡಳಿತ ಮತ್ತು ಪೊಲೀಸ್‌ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಸರಕಾರ ಜಾರಿಗೊಳಿಸಿದ ಕೆಲ ನಿಯಮ ಉಲ್ಲಂಘನೆಗೆಯಾಗದಂತೆ ರಂಜಾನ್‌ ಉಪವಾಸ ಮಾಡಬೇಕು. ಮನೆಯಲ್ಲಿ ಪ್ರಾರ್ಥನೆ ಸಂದರ್ಭ ಹೆಚ್ಚಿನ ಜನರು ಸೇರದಂತೆ ಸಮಾಜದ ಹಿರಿಯರು ನಿಗಾವಹಿಸಬೇಕು ಎಂದು ಕೋರಿದರು.

ಲಿಂಗಸುಗೂರು ಡಿವೈಎಸ್‌ಪಿ ಎಸ್‌.ಎಸ್‌. ಹುಲ್ಲೂರು ಮಾತನಾಡಿ, ಮಸೀದಿ ಸುತ್ತಲು ಹಣ್ಣಿನ ವ್ಯಾಪಾರಕ್ಕೆ ನಿಷೇಧಿ ಸಲಾಗಿದೆ. ರಂಜಾನ್‌ ಉಪವಾಸ ಮುಗಿದ ನಂತರ ಇಫ್ತೀಯಾರ್‌ ಕಾರ್ಯಕ್ರಮ ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಯೂನೂಸ್‌ ಶಾಹಪುರಿ, ಮಾನಪ್ಪ ಮೇಸ್ತ್ರೀ, ಅಬ್ದುಲ್‌ ಅಜೀಜ್‌, ಬಾಬುಸಾಬ. ಸಿಪಿಐ ಆರ್‌. ಎಂ. ನದಾಫ್‌, ಪಿಎಸ್‌ಐ ಎಲ್‌.ಬಿ. ಅಗ್ನಿ, ರಂಗಪ್ಪ, ವಿರುಪಾಕ್ಷಪ್ಪ, ಪುರಸಭೆ ಸದಸ್ಯ ಖಾಜಾಹುಸೇನ್‌, ರವಿ ಅಕ್ಕರಕಿ, ಬಸವರಾಜ ಸೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next