Advertisement

ಕೂಲಿ ಕಾರ್ಮಿಕರಿಗೆ ನಾಯಕ ನೆರವು

05:28 PM May 07, 2020 | Naveen |

ದೇವದುರ್ಗ: ಕೋವಿಡ್ ವೈರಸ್‌ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದ ಕೂಲಿ ಕಾರ್ಮಿಕರಗೆ ಶಾಸಕ ಕೆ. ಶಿವನಗೌಡ ನಾಯಕ ನೆರವು ನೀಡಿದ್ದಾರೆ. ಚಿತ್ರದುರ್ಗ ಕ್ವಾರಂಟೈನ್‌ ಲ್ಲಿದ್ದ ಗರ್ಭಿಣಿಯೊಬ್ಬಳನ್ನು ಜಾಲಹಳ್ಳಿಗೆ ಕರೆತರುವ ವ್ಯವಸ್ಥೆ ಮಾಡಿದ್ದಾರೆ.

Advertisement

ಪುಣೆಯಲ್ಲಿ ನೆಲೆಸಿದ್ದ ಗುಂಟ್ರಾಳ ಗ್ರಾಮದ 25 ಕೂಲಿಕಾರರು ಹಾಗೂ ಗೆಜ್ಜೆಬಾವಿ ಗ್ರಾಮದ 21 ಜನರನ್ನು ಜಿಲ್ಲಾಡಳಿತ ನೆರವಿನಿಂದ ವಿಶೇಷ ಬಸ್‌ ಮೂಲಕ ಕರೆತರಲಾಗಿದೆ. ಬೆಂಗಳೂರು, ಮೈಸೂರು, ಬಾಗಲಕೋಟೆ ಸೇರಿದಂತೆ ವಿಶೇಷ ಚಿಕಿತ್ಸಾ ಸೌಲಭ್ಯ ಬೇಡಿಕೆಯುಳ್ಳ ಸುಮಾರು 300 ರೋಗಿಗಳಿಗೆ ಪಾಸ್‌ ವ್ಯವಸ್ಥೆ ಮಾಡಿದ್ದಾರೆ.

ಪುಣೆಯಲ್ಲಿ ನೆಲೆಸಿರುವ ಕರಡಿಗುಡ್ಡ ಮತ್ತು ಬಂಗಾರ ಬಂಡಿ ಕೂಲಿಕಾರರಿಗೆ ಅಲ್ಲಿಯ ಜಿಲ್ಲಾಡಳಿತ ಹಾಗೂ ಸ್ಥಳೀಯ ಕ್ಷೇತ್ರದ ಶಾಸಕರನ್ನು ಸಂಪರ್ಕಿಸಿ ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಕ್ಯಾನ್ಸರ್‌ ಸೇರಿ ಇತರೆ ಕಾಯಿಗಳಿಂದ ನೆರಳುತ್ತಿದ್ದವರಿಗೆ ಬೇರೆ ಜಿಲ್ಲೆಗೆ ಹೋಗಿ ಚಿಕಿತ್ಸೆ ಪಡೆಯಲು ಪಾಸ್‌ ವ್ಯವಸ್ಥೆ ಮಾಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next