Advertisement

48 ಚೀಲ ಪಡಿತರ ಅಕ್ಕಿ ವಶ

04:15 PM Jun 21, 2020 | Naveen |

ದೇವದುರ್ಗ: ತಾಲೂಕಿನ ಕಕ್ಕಲದೊಡ್ಡಿ ಗ್ರಾಮ ಸೇರಿ ವಿವಿಧೆಡೆ ಪಡಿತರ ಫಲಾನುಭವಿಗಳಿಂದ ಅಕ್ರಮವಾಗಿ ಪಡಿತರ ಧಾನ್ಯ ಖರೀದಿಸಿ ಸಾಗಿಸುತ್ತಿದ್ದ ವಾಹನದ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೇದಾರ್‌ ಬಸವಂತಸಿಂಗ್‌ ದಾಳಿ ನಡೆಸಿ 48 ಪಾಕೇಟ್‌ ಅಕ್ಕಿ ವಶಕ್ಕೆ ಪಡೆದಿದ್ದಾರೆ.

Advertisement

ಕಕ್ಕಲದೊಡ್ಡಿ ಗ್ರಾಮದಲ್ಲಿ ಇಬ್ಬರು ವ್ಯಾಪಾರಿಗಳು ಫಲಾನುಭವಿಗಳ ಮನೆಮನೆಗೆ ತೆರಳಿ ಸೇರಿಗೆ 20 ರೂ. ಅಕ್ಕಿ ಖರೀದಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬಸವಂತಸಿಂಗ್‌, ಸೋಮಮರಡಿ ಗ್ರಾಮದಲ್ಲಿ ವಾಹನ ಮೇಲೆ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದು 48 ಪಾಕೀಟ್‌ ಅಕ್ಕಿ ಜಪ್ತಿ ಮಾಡಿದ್ದಾರೆ. ಈ ಕುರಿತು ಜಾಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಚಾಲಕ ಅಮರಯ್ಯಸ್ವಾಮಿ, ವ್ಯಾಪಾರಿ ವಿಶ್ವನಾಥ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಶಿರಸ್ತೇದಾರ್‌ ಬಸವಂತಸಿಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next