Advertisement

ಯುವತಿಯನ್ನು ‘ದೇವದಾಸಿ’ಪದ್ದತಿಗೆ ದೂಡಿದ ಕುಟುಂಬ; ಮೂವರ ಬಂಧನ

12:27 PM Dec 28, 2022 | Team Udayavani |

ಕೊಪ್ಪಳ: ಕೊಪ್ಪಳ ತಾಲೂಕಿನ ಚಿಲವಾಡಗಿ ಗ್ರಾಮದ ಯುವತಿಯನ್ನು ಅದೇ ಕುಟುಂಬ ದೇವದಾಸಿ ಪದ್ದತಿಗೆ ದೂಡಿ, ಮುತ್ತು ಕಟ್ಟಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಚಿಲವಾಡಗಿ ಗ್ರಾಮದ ಯುವತಿಗೆ ಅದೇ ಕುಟುಂಬವು ಕಳೆದ ಏಂಟು ತಿಂಗಳ ಹಿಂದೆ ತಾಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಮುತ್ತು ಕಟ್ಟಿದ್ದಾರೆ‌‌. ಕಾಲಿಗೆ ಚೈನು, ಕೈಗೆ ಬಳೆ, ಕೊರಳಿಗೆ ತಾಳಿ ಕಟ್ಟಿಸಿ ದೇವದಾಸಿ ಪದ್ದತಿಗೆ ದೂಡಿದ್ದಾರೆ.

ಇದನ್ನೂ ಓದಿ:ಭಾರತಕ್ಕೆ ಬಂದಿಳಿದ ಸಿರಾಜ್ ಗೆ ಆಘಾತ.. ವಿಮಾನದಲ್ಲಿದ್ದ ಬ್ಯಾಗ್ ನಾಪತ್ತೆ

ಈ ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಪುನರ್ವಸತಿ ಕೇಂದ್ರದ ಅಧಿಕಾರಿ ಪೂರ್ಣಿಮಾ ಅವರು ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಕುಟುಂಬದ ನಾಲ್ವರ ಮೇಲೆ ಕೇಸ್ ದಾಖಲಗಿದೆ. ಪೊಲೀಸರು ಈಗಾಗಲೆ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ವಿಧಿಸಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯ ನಡೆದಿದೆ.

ಮುತ್ತು ಕಟ್ಟುವ ಪ್ರಕರಣ ಗಮನಿಸಿದರೆ ಜಿಲ್ಲೆಯಲ್ಲಿ ಇನ್ನೂ ದೇವದಾಸಿ ಪದ್ದತಿ ಜೀವಂತ ಇದೆ ಎನ್ನುವುದು ಸ್ಪಷ್ಟವಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next