Advertisement
ಹನುಮಸಾಗರ ಬಸ್ ನಿಲ್ದಾಣದಲ್ಲಿ ಸಂಚಾರಿ ನಿಯಂತ್ರಣಾಧಿಕಾರಿ ಇಲ್ಲದಿರುವುದು ಯಜಮಾನನಿಲ್ಲದ ಮನೆಯಂತಾಗಿದೆ. ಬೇರೆ ವಿಭಾಗದ ಬಸ್ಗಳು ನಿಲ್ದಾಣಕ್ಕೆ ಸರಿಯಾಗಿ ಬಾರದೇ ಸಾಕಷ್ಟು ತೊಂದರೆಯಾಗಿದೆ. ದೂರದ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬಂದರೇ ಪಾನ್ಶಾಪ್ ವ್ಯಾಪಾರಿಯೇ ವ್ಯಾಪಾರವನ್ನು ಬಿಟ್ಟು ಪ್ರಯಾಣಿಕರಿಗೆ ಬಸ್ ಯಾವಾಗ ಬರುತ್ತೇ? ಯಾವಾಗ ಹೋಗುತ್ತೆ ಎಂದು ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಪ್ರಾರಂಭವಾಗದ ಕ್ಯಾಂಟೀನ್: ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ಕಟ್ಟಡವಿದ್ದರೂ ಯಾರು ಬರದೇ ಇರುವುದರಿಂದಾಗಿ ಕ್ಯಾಂಟೀನ್ಗೆ ಬೀಗ ಹಾಕಲಾಗಿದೆ. ಬಿರು ಬಿಸಿಲಿನಿಂದ ಬರುವ ಪ್ರಯಾಣಿಕರಿಗೆ ಸೂಕ್ತವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ಬಸ್ ನಿಲ್ದಾಣದ ಆವರಣದಲ್ಲಿ ನೆಟ್ಟ ಸಸಿಗಳು ಸೂಕ್ತ ನಿರ್ವಹಣೆಯಿಲ್ಲದೇ ಒಣಗಿವೆ. ಕೂಡಲೇ ಕುಷ್ಟಗಿ ಡಿಪೋ ಮ್ಯಾನೇಜರ ಕೂಡಲೆ ಎಚ್ಚೆತ್ತುಕೊಂಡು ಹನುಮಸಾಗರ ಬಸ್ ನಿಲ್ದಾಣಕ್ಕೆ ಖಾಯಂ ಸಂಚಾರಿ ನಿಯಂತ್ರಣಾಕಾರಿಯನ್ನು ನೇಮಿಸಬೇಕು , ನೀರಿನ ವ್ಯವಸ್ಥೆಯನ್ನು ಕಲ್ಪಿಸಿ ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಮಾಡಬೇಕು. ಬಸ್ ನಿಲ್ದಾಣ ಸುತ್ತಲೂ ನಡೆಯುತ್ತಿರುವ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಸಂಚಾರಿ ನಿಯಂತ್ರಕರು ಇಲ್ಲದಿರುವುದರಿಂದ ಬಸ್ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಸ್ ನಿಲ್ದಾಣದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಶೌಚಾಲಯ ನಿರ್ಮಿಸಿದ್ದರೂ ಅದು ಬಳಕೆಗೆ ಲಭ್ಯವಿಲ್ಲ. ಇದರಿಂದಾಗಿ ದೂರದ ಪ್ರಯಾಣಿಕರಿಗೆ ವಿಶೇಷವಾಗಿ ಮಹಿಳೆಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
•ವೆಂಕಟೇಶ ಹೊಸಮನಿ, ಸ್ಥಳೀಯ
•ವಸಂತಕುಮಾರ ವಿ ಸಿನ್ನೂರ
ಹನುಮಸಾಗರ ಬಸ್ ನಿಲ್ದಾಣದಲ್ಲಿ ಈಗಾಗಲೇ ಸಂಚಾರಿ ನಿಯಂತ್ರಿಕರಿದ್ದು, ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ಸಮಸ್ಯೆಗಳ ಕುರಿತು ಮಾಹಿತಿಯನ್ನು ಪಡೆದು ಸೂಕ್ತ ಕ್ರಮಕೈಗೊಳ್ಳಲಾಗುವುದು.
•ಸಂತೋಷ, ಕುಷ್ಟಗಿ ಡಿಪೋ ಮ್ಯಾನೇಜರ್
ಕೆಲ ತಿಂಗಳ ಹಿಂದೆ ಸ್ನೇಹಿತರೆಲ್ಲ ಸೇರಿ ಬಸ್ ನಿಲ್ದಾಣದ ಸುತ್ತಮುತ್ತಲು ಶ್ರಮದಾನ ಮಾಡಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿದ್ದೇವು. ಮದ್ಯವ್ಯಸನಿಗಳ ಹಾವಳಿಯಿಂದಾಗಿ ಬಸ್ ನಿಲ್ದಾಣದ ವಾತಾವರಣ ಕಲುಷಿತಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
•ರಾಘವೇಂದ್ರ ಈಳಗೇರ, ಸ್ಥಳೀಯ