Advertisement

ದ್ವಿಚಕ್ರ ವಾಹನ ಕಳ್ಳನ ಬಂಧನ

02:59 PM Apr 14, 2022 | Niyatha Bhat |

ಭದ್ರಾವತಿ: ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಳೇನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಹಳೇ ಸೀಗೇಬಾಗಿಯ ಜಂಡಾಕಟ್ಟೆ ಬಳಿಯ ವಾಸಿ ಶರವಣ (37) ಎಂಬುವನನ್ನು ಸೀಗೇಬಾಗಿಯ ಬಸ್‌ ನಿಲ್ದಾಣದಲ್ಲಿ ಬಂಧಿಸಿದ ಪೊಲೀಸರು, ವಿಚಾರಣೆ ನಡೆಸಿದಾಗ, ನಗರದ ಬಿ.ಎಚ್. ರಸ್ತೆ ತಿಮ್ಮಯ್ಯ ಮಾರುಕಟ್ಟೆ ಬಳಿ ಒಂದು ವಾಹನ ಮತ್ತು ಚೆನ್ನಗಿರಿ ರಸ್ತೆಯಲ್ಲಿರುವ ಮರಾಠ ಸಮಾಜದ ಭವಾನಿ ಕಾಂಪ್ಲೆಕ್ಸ್‌ ಬಳಿ ಒಂದು ಸೇರಿ ಒಟ್ಟು ಎರಡು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ.

ಆತನಿಂದ 75 ಸಾವಿರ ರೂ. ಬೆಲೆ ಬಾಳುವ ಹೀರೋ ಸ್ಲೆಂಡರ್‌ ಪ್ಲಸ್‌ ಕೆಎ-34 ಇಬಿ 0612 ಹಾಗೂ ಹೊಂಡಾ ಕೆಎ-14 ಇಎನ್‌ -3875 ನಂಬರ್‌ ವಾಹನಗಳನ್ನು ಮತ್ತು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next