Advertisement

ನಾಲ್ವರು ಸುಲಿಗೆಕೋರರ ಬಂಧನ

01:09 AM Sep 08, 2019 | Team Udayavani |

ಬೆಂಗಳೂರು: ಹೊರ ವರ್ತುಲ ರಸ್ತೆಗಳಲ್ಲಿ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತಿದ್ದ ನಾಲ್ವರ ತಂಡವನ್ನು ಮಾರತ್ತಹಳ್ಳಿ ಬಂಧಿಸಿದ್ದಾರೆ. ಯಲಹಂಕದ ರೋಹಿತ್‌ (27), ಕಿರಣ್‌ ಕುಮಾರ್‌(19), ವರ್ತೂರಿನ ಶ್ರೀನಿವಾಸ್‌ ಅಲಿಯಾಸ್‌ ಸೀನಾ (19) ಹಾಗೂ ಪಶ್ಚಿಮ ಬಂಗಾಳ ಮೂಲದ ರಾಜು ಹೆಮ್ರಾಮ್‌ (19) ಬಂಧಿತರು. ಆರೋಪಿಗಳಿಂದ 7 ಲಕ್ಷ ರೂ. ಮೌಲ್ಯದ 96 ಗ್ರಾಂ ಚಿನ್ನಾಭರಣ, 19 ಮೊಬೈಲ್‌, ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

Advertisement

ಮೋಜಿನ ಜೀವನಕ್ಕಾಗಿ ಆರೋಪಿಗಳು ಕಳವು ಕೃತ್ಯಕ್ಕೆ ಇಳಿದಿದ್ದರು. ಮಾರತ್ತಹಳ್ಳಿ ಸುತ್ತಮುತ್ತ ಹಾಗೂ ಹೊರ ವರ್ತುಲ ರಸ್ತೆಗಳಲ್ಲಿ ಓಡಾಡುವವರನ್ನು ಅಡ್ಡಹಾಕಿ ಚಿನ್ನದ ಸರ, ಮೊಬೈಲ್‌ ಸೇರಿ ಬೆಲೆಬಾಳುವ ವಸ್ತು ಸುಲಿಗೆ ಮಾಡುತ್ತಿದ್ದರು. ಕದ್ದ ವಾಹನಗಳಲ್ಲಿ ಸುತ್ತಾಡಿ ಕೃತ್ಯ ಎಸಗುತ್ತಿದ್ದ ಆರೋಪಿಗಳು ಮಾರತ್ತಹಳ್ಳಿ ಪೊಲೀಸರು ರಸ್ತೆಯಲ್ಲಿ ತಪಾಸಣೆ ನಡೆಸುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next