Advertisement

ಉಡಾ ಬೇಟೆಯ ಟಿಕ್ ಟಾಕ್ ವಿಡಿಯೋ ಮಾಡಿದ್ದ ಯುವಕನ ಬಂಧನ

06:10 PM Jun 15, 2020 | keerthan |

ಗಂಗಾವತಿ: ತಾಲೂಕಿನ ಮಲ್ಲಾಪೂರ ಅರಣ್ಯ ಪ್ರದೇಶದಲ್ಲಿ ಉಡಾ ಬೇಟೆಯಾಡಿ ಇದರ ವಿಡಿಯೋವನ್ನು ಫೇಸ್ಬುಕ್ ವಾಟ್ಸಾಪ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಮಲ್ಲಾಪೂರ ಗ್ರಾಮದ ತಾತಾಪ್ಪ ಎಂಬ ಯುವಕನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಈತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ವನ್ಯ ಪ್ರಾಣಿಗಳ ಬೇಟೆ ನಿಷೇಧ: ಅರಣ್ಯ ಪ್ರದೇಶದಲ್ಲಿರುವ ಪ್ರಾಣಿ ಪಕ್ಷಿ,ಹಾವು ಸರಿಸೃಪ ಸೇರಿ ಎಲ್ಲಾ ಬಗೆಯ ವನ್ಯ ಜೀವಿಗಳ ಬೇಟೆಯಾಡುವುದು ಮತ್ತು ಹಿಡಿದು ಸಾಕುವುದು ನಿಷೇಧ ಮಾಡಲಾಗಿದೆ. ಗಂಗಾವತಿ ಆನೆಗೊಂದಿ ಆಗೋಲಿ ಸೇರಿ ಏಳು ಗುಡ್ಡ ಹಾಗೂ ಕಿಷ್ಕಿಂದಾ ಬೆಟ್ಟಗಳಲ್ಲಿ ಅಪರೂಪದ ಪ್ರಾಣಿ ಪಕ್ಷಿಗಳಿದ್ದು ಯಾರಾದರೂ ಬೇಟೆಯಾಡುವುದಾಗಲಿ ಸಾಕುವುದಾಗಲಿ ಮಾಡಿದರೆ ಸಾರ್ವಜನಿಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅರಣ್ಯಾಧಿಕಾರಿ ಶಿವರಾಜ್ ಮೇಟಿ ಉದಯವಾಣಿ ಮೂಲಕ ಮನವಿ ಮಾಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next