Advertisement

ದಾಂಡೇಲಿ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಬಂಧನ

09:56 AM Dec 23, 2021 | Team Udayavani |

ದಾಂಡೇಲಿ: ನಗರದ ವಿವಿದೆಡೆಗಳಲ್ಲಿ ಗೂಡಂಗಡಿ, ಅಂಗಡಿಗಳಲ್ಲಿ ಮತ್ತು ಮೊಬೈಲ್ ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಘಟನೆ ಬುಧವಾರ ನಡೆದಿದೆ.

Advertisement

ನಗರದ ಸಂಡೆ ಮಾರ್ಕೆಟ್ ಹತ್ತಿರದ ಮೊಬೈಲ್ ದುರಸ್ತಿ ಅಂಗಡಿಯಲ್ಲಿ ಅಂಗಡಿಯ ಮೇಲ್ಚಾವಣಿ ಮುರಿದು ಮೊಬೈಲ್ ಗಳನ್ನು, ವಿವಿಧ ಮೊಬೈಲ್ ಗಳ ಬ್ಯಾಟರಿಗಳನ್ನು ಮತ್ತು ನಗದು 5500 ರೂ. ಕಳವು ಮಾಡಲಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ನಗರ ಠಾಣೆಯ ಪಿಎಸೈ ಯಲ್ಲಪ್ಪ.ಎಸ್ ನೇತೃತ್ವದ ಪೊಲೀಸ್ ತಂಡ ಆರೋಪಿಯ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ನಗರದ ಹಳಿಯಾಳ ರಸ್ತೆಯ ಅಲೈಡ್ ಪ್ರದೇಶದ ಶಿವ ಯಾನೆ ಶಿವಕುಮಾರ್ ಎಂಬಾತನಾಗಿದ್ದಾನೆ. ಆರೋಪಿಯನ್ನು ಬಂಧಿಸಿ ತನಿಖೆಗೊಳಪಡಿಸಿದಾಗ ಈ ಹಿಂದೆ ನಗರದ ವಿವಿಧ ಗೂಡಂಗಡಿ ಹಾಗೂ ಸಣ್ಣ ಸಣ್ಣ ಅಂಗಡಿಗಳಲ್ಲಿ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಿಎಸೈ ಯಲ್ಲಪ್ಪ.ಎಸ್ ಅವರ ನೇತೃತ್ವದ ತಂಡದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಭೀಮಪ್ಪ, ಪ್ರಶಾಂತ ನಾಯ್ಕ, ಜಯನ್ ಗೌಡ, ಆದಪ್ಪ ಧಾರವಾಡ್ಕರ್, ಚಿನ್ಮಯ ಅವರುಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next