Advertisement

Hunsur: ದುಷ್ಕರ್ಮಿಗಳಿಂದ ಫಲಕ್ಕೆ ಬಂದಿದ್ದ 600 ಅಡಿಕೆ ಮರಗಳ ನಾಶ

06:01 PM Aug 09, 2023 | Team Udayavani |

ಹುಣಸೂರು : ತಾಲೂಕಿನ ಕಡೆ ಮನುಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಫಲಕ್ಕೆ ಬಂದಿದ್ದ 600 ಅಡಿಕೆ ಮರಗಳನ್ನು ನಾಶಪಡಿಸಿದ್ದಾರೆ
ಕಡೆಮನುಗನಹಳ್ಳಿ ಗ್ರಾಮದ ಕೃಷ್ಣೆಗೌಡರ ಮಗ ಕೆ. ವೆಂಕಟೇಶ್ ರವರಿಗೆ ಸೇರಿದ ಎರಡು ಎಕರೆ ಅಡಿಕೆ ತೋಟದಲ್ಲಿ ಸುಮಾರು ಫಲಕ್ಕೆ ಬಂದಿದ್ದ 600 ಅಡಿಕೆ ಮರಗಳನ್ನು ಮಂಗಳವಾರ ರಾತ್ರಿ ದುಷ್ಕರ್ಮಿಗಳು ಮನೆಯ ಹಿಂಬದಿಯಲ್ಲಿ ಶಬ್ದ ಬಾರದ ರೀತಿಯಲ್ಲಿ ಮರಗಳನ್ನು ಕಡೆದು ಹಾಕಿದ್ದು ರೈತ ವೆಂಕಟೇಶ್ ಬೆಳಿಗ್ಗೆ ಎದ್ದು ನೋಡಿದರೆ ಮರಗಳೆಲ್ಲ ಕಡೆದ ಸ್ಥಿತಿ ನೋಡಿ ಗೋಳಾಡುತ್ತಿದ್ದು ಅಕ್ಕಪಕ್ಕದ ರೈತರು ಬಂದು ಸಮಾಧಾನಪಡಿಸಿದ್ದಾರೆ‌.

Advertisement

ಆಗ್ರಹ: ಘಟನಾ ಸ್ಥಳದಲ್ಲಿ ನೆರೆದಿದ್ದ ಗ್ರಾಮಸ್ಥರು ಕಾಡುಪ್ರಾಣಿಗಳ ಹಾವಳಿ ತಪ್ಪಿಸಿ ಕಷ್ಟಪಟ್ಟು ಬೆಳೆದಿರುವ ಫಲಕ್ಕೆ ಬಂದ ಮರಗಳನ್ನು ಹೀಗೆ ಕಡೆದರೆ ಮುಂದಿನ ದಿನಗಳಲ್ಲಿ ಎಲ್ಲಾ ರೈತರು ಸಂಕಷ್ಟ ಅನುಭವಿಸಬೇಕಾಗುತ್ತದೆ ಕೃತ್ಯ ಮಾಡಿರುವವರನ್ನು ಕಂಡುಹಿಡಿದು ಅವರಿಗೆ ತಕ್ಕ ಶಿಕ್ಷೆ ಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಬಂದು ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next