Advertisement

ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ

10:35 AM Feb 15, 2019 | udayavani editorial |

ಹೊಸದಿಲ್ಲಿ : ಪಾಕಿಸ್ಥಾನದಲ್ಲಿರುವ ಭಯೋತ್ಪಾದಕರ ನೆಲೆಗಳನ್ನು ಸಂಪೂರ್ಣ ಧ್ವಂಸ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್‌ (ವಿಹಿಂಪ) ಕೇಂದ್ರ ಸರಕಾರವನ್ನು ಆಗ್ರಹಿಸಿದೆ. ಈ ವಿಷಯದಲ್ಲಿ ಭಾರತ ಸರಕಾರ ದೃಡತೆ, ಪರಿಣಾಮಕಾರಿತ್ವ ಮತ್ತು ಖಚಿತತೆಯನ್ನು ತಳೆಯಬೇಕು ಎಂದು ಅದು ಒತ್ತಾಯಿಸಿದೆ. 

Advertisement

ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ನಿನ್ನೆ ಗುರುವಾರ 40 ಸಿಆರ್‌ಪಿಎಫ್ ಯೋಧನ್ನು ಆತ್ಮಾಹುತಿ ದಾಳಿಯಲ್ಲಿ ಬಲಿ ಪಡೆದಿರುವ ಉಗ್ರನು ಸ್ಥಳೀಯ ತರುಣನಾಗಿದ್ದು ಧರ್ಮದ ಹೆಸರಿನಲ್ಲಿ ಬುದ್ದಿಪಲ್ಲಟಗೊಂಡು ಈ ದುಷ್ಕೃತ್ಯ ಎಸಗಿದ್ದಾನೆ ಎಂದು ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಆಲೋಕ್‌ ಕುಮಾರ್‌ ಹೇಳಿದ್ದಾರೆ. 

ಪುಲ್ವಾಮಾ ಉಗ್ರ ದಾಳಿಯ ಹೊಣೆ ಹೊತ್ತಿರುವ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯು ಪಾಕಿಸ್ಥಾನ ಮೂಲದ್ದಾಗಿದ್ದು ಪಾಕ್‌ ಬೆಂಬಲಿತವಾಗಿದೆ; ಆದುದರಿಂದ ಉಗ್ರ ಸಮೂಹಗಳಿಗೆ ಬೆಂಬಲ ಕೊಡುವ ಪಾಕಿಸ್ಥಾನದಲ್ಲಿನ ಎಲ್ಲ ಉಗ್ರ ಶಿಬಿರಗಳನ್ನು, ನೆಲೆಗಳನ್ನು ಧ್ವಂಸಗೊಳಿಸಬೇಕಾದ ಅಗತ್ಯವಿದೆ ಎಂದು ವಿಹಿಂಪ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next